ಕೊಡಗು

ದೇವರಕೊಲ್ಲಿಯಲ್ಲಿ ಭೀಕರ ಅಪಘಾತ

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದೇವಕೊಲ್ಲಿಯ ಗಾರೆಮುರಿ ಬಳಿ ಎರಡು ಕಾರುಗಳ ನಡುವೆ ಭಾನುವಾರ ಸಂಜೆ 4 ಗಂಟೆಗೆ ಭೀಕರ ಅಪಘಾತ ಸಂಭವಿಸಿದೆ.

ಅಲ್ಟ್ರೋಜ್ ಹಾಗೂ ಪುಂಟೊ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡೂ ಕಾರು ನಜ್ಜುಗುಜ್ಜಾಗಿದೆ. ನಾಲ್ವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಗಣೇಶ ಆಚಾರ್ಯ, ಶರತ್ ಸಂಪಾಜೆ ಕೀಲಾರು, ಪ್ರಮೋದ್ ಗುತ್ತಿಗಾರು, ಸಂಪಾಜೆ ಉಪ ಠಾಣೆ ಆರಕ್ಷಕ ಸಿಬ್ಬಂದಿ , ಕೊಡಗು ಸಂಪಾಜೆ ಅರಣ್ಯಾಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಾಯಾಳುಗಳನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರ ಪೈಕಿ ಒಂದು ಕಾರಿನಲ್ಲಿದ್ದವರು ಮಂಗಳೂರು ಮೂಲದವರು, ಮತ್ತೊಂದು ಕಾರಿನಲ್ಲಿದ್ದವರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ.

Related posts

ಮಡಿಕೇರಿ:ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ ಭೀತಿ,60 ವರ್ಷ ತುಂಬಿದವರಿಗೆ ಮಾಸ್ಕ್ ಕಡ್ಡಾಯ: ಶೀಘ್ರ ಮಾರ್ಗಸೂಚಿ– ದಿನೇಶ್ ಗುಂಡೂರಾವ್

ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ‘ಚಿನ್ನಾರಿಮುತ್ತ’ ಎಂಟ್ರಿ,ಬಾಮೈದ ರಕ್ಷಿತ್ ಗೆಲುವಿಗೆ ಮುಂದಾದ ನಟ ವಿಜಯ್ ರಾಘವೇಂದ್ರ

ಕೊಡಗು : ಈ ವರ್ಷ 90 ಗ್ರಾಮಗಳಿಗೆ ಕಾದಿದೆ ಪ್ರವಾಹ ಕಂಟಕ..! ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆಗೆ ಅಭ್ಯಾಸ!