ಕರಾವಳಿ

ದೇವರಕೊಲ್ಲಿ: ಎರಡು ಕಡೆ ಭೂಕುಸಿತ, ರಸ್ತೆ ಸಂಚಾರಕ್ಕೆ ಅಡ್ಡಿ

ನ್ಯೂಸ್ ನಾಟೌಟ್ : ಭಾರಿ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಗ್ರಾಮದ ಎರಡು ಕಡೆ ಭೂ ಕುಸಿತ ಉಂಟಾಗಿರುವಂತಹ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಹಿನ್ನೆಲೆ ಸಂಪರ್ಕ ಕಡಿತವಾಗಿದ್ದು ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು. ಇದರಿಂದಾಗಿ ರಸ್ತೆಯ ಎರಡೂ ಕಡೆ ಸಾಲುಗಟ್ಟಿ ವಾಹನಗಳು ನಿಂತಿವೆ. ಗುಡ್ಡ ಜರಿದು ಮಣ್ಣಿನೊಂದಿಗೆ ರಸ್ತೆ ಮೇಲೆ‌ ಮರಗಳು ಬಂದು ಬಿದ್ದಿವೆ. ರಸ್ತೆಯಲ್ಲಿ ಬಿದ್ದಿರುವ ಮರವನ್ನು ಪ್ರಯಾಣಿಕರು ತೆರವುಗೊಳಿಸಿದರು. ನಂತರ ಸಂಚಾರ ಮಾಡಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ.

Related posts

ಅಗ್ನಿ ಅವಘಡದಿಂದ ಪಾರಾದ ವಿದ್ಯಾರ್ಥಿಗಳು,ಕಟ್ಟಡದಿಂದ ಜಿಗಿದೇ ಬಿಟ್ಟರು!ವಿಡಿಯೋ ವೈರಲ್..

ಸಂಪಾಜೆ: ನೌಕರರಿಗೆ ಲೇಡಿ ಪಿಡಿಒ ಕಿರಿಕಿರಿ, ನೊಂದವರಿಂದ ಸಿಇಒಗೆ ದೂರು

ಉಡುಪಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ:ಗಾರೆ ಕೆಲಸ ಮಾಡುತ್ತಿದ್ದ ಯುವಕನನ್ನು ಗುಂಡಿಕ್ಕಿ ಹತ್ಯೆ