Latestಕರಾವಳಿಕ್ರೈಂಮಂಗಳೂರು

ದೇರಳಕಟ್ಟೆ: ಆಸ್ಪತ್ರೆಯೊಂದಕ್ಕೆ ಹುಸಿ‌ ಬಾಂಬ್ ಬೆದರಿಕೆ..! ಆರೋಪಿಗಾಗಿ ಹುಡುಕಾಟ..!

237

ನ್ಯೂಸ್‌ ನಾಟೌಟ್‌: ಮಂಗಳೂರಿನ ದೇರಳಕಟ್ಟೆ ಸಮೀಪದ ಕಣಚೂರು‌ ಮೆಡಿಕಲ್ ಕಾಲೇಜಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಬಾಂಬ್ ಬೆದರಿಕೆಯೊಡ್ಡಿದ ಘಟನೆ ಬುಧವಾರ(ಜೂ.4) ನಡೆದಿದೆ,‌ ಬಳಿಕ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ತನಿಖೆ ನಡೆಸಿ ಪರಿಶೀಲನೆ ನಡೆಸಿ, ಹುಸಿ ಬಾಂಬ್ ಕರೆ ಎನ್ನಲಾಗಿದೆ.

ಬೆದರಿಕೆ ಕರೆಯ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಆಸ್ಪತ್ರೆ ಹಾಗೂ ಕಾಲೇಜನ್ನು ಪರಿಶೀಲಿಸಿ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿಸಿದ್ದಾರೆ‌.

ಬುಧವಾರ ಬೆಳಿಗ್ಗೆ 8.15ರ ಹೊತ್ತಿಗೆ ದೂರವಾಣಿ ಕರೆ ಬಂದಿದ್ದು. ಅದರಲ್ಲಿ ಬೆಳಿಗ್ಗೆ 11 ಗಂಟೆಗೆ ಬಾಂಬು ಬ್ಲಾಸ್ಟ್ ಮಾಡುವುದಾಗಿ ಹಾಗೂ ಎಲ್ಲರನ್ನು ಆಸ್ಪತ್ರೆ ಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮೊಬೈಲ್ ನಂಬರ್ ಪರಿಶೀಲಿಸಿ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

ಕೇವಲ ಯೂಟ್ಯೂಬ್‌ ನಿಂದ ಅಧ್ಯಯನ ಮಾಡಿ ‘ಜೆಇಇ ಅಡ್ವಾನ್ಸ್ಡ್ ‘ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ ಯುವಕ..! ಮೇಸ್ತ್ರಿ ಕೆಲಸ ಮಾಡುವ ತಂದೆಯ ಆಸೆ ಈಡೇರಿಸಿದ ಮಗ..!

ಒಂದೇ ದಿನ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸಿ ದಾಖಲೆ ಬರೆದ ಕೆಎಂಎಫ್..!​ ಹೊಸ ಬೇಕರಿ ಉತ್ಪನ್ನಗಳ ಸೇರ್ಪಡೆ..!

See also  ಕಾಲೇಜಿಗೆ ಅಕ್ರಮ ಪ್ರವೇಶ ಮತ್ತು ಬೆದರಿಕೆ ಆರೋಪ! ಡಾ| ಜ್ಯೋತಿ ಆರ್.ಪ್ರಸಾದ್ ರಿಂದ ಸುಳ್ಯ ಠಾಣೆಗೆ ದೂರು
  Ad Widget   Ad Widget   Ad Widget   Ad Widget   Ad Widget   Ad Widget   Ad Widget