ಸುಳ್ಯ: ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಮಹಿಳೆ ಶವ ಪಯಸ್ವಿನಿ ನದಿಯಲ್ಲಿ ಪತ್ತೆಯಾದ ಘಟನೆ ಪೆರಾಜೆ ಕಲ್ಚೆರ್ಪೆ ಯಿಂದ ವರದಿಯಾಗಿದೆ. ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿ ಯವರು ಸೆ.11 ರಂದು ಸಂಜೆ ಅರಂತೋಡಿನ ಮಾಡದಕಾನ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ಮರಳಿ ಮನೆಗೆ ಬಾರದೇ ಇದ್ದುದರಿಂದ ಅಂದು ರಾತ್ರಿಯಿಂದ ಅರಂತೋಡು ಗ್ರಾಮಸ್ಥರು ಹುಡುಕಿದರೂ ಪತ್ತೆಯಾಗಲಿಲ್ಲ. ಮರುದಿನ ಸುಳ್ಯ ಅಗ್ನಿ ಶಾಮಕದಳದವರು ಮತ್ತು ಊರವರು ಹುಡುಕಲು ಪ್ರಾರಂಭಿಸಿದರೂ ಸಂಜೆಯವರಗೆ ಮಹಿಳೆಯ ಶವ ಪತ್ತೆಯಾಗಲಿಲ್ಲ .ಸಮಾರು ನಾಲ್ಕು ದಿನದಿಂದ ಅಗ್ನಿಶಾಮಕ ದಳ ದವರೊಂದಿಗೆ ಇಂದು ಪೈಚಾರ್ ಮುಳುಗು ತಜ್ಞರ ತಂಡ ಬೆಳಿಗ್ಗೆ ಯಿಂದ ಹುಡುಕುತ್ತಿದ್ದರು .ಇಂದು ಮಧ್ಯಾಹ್ನ ಪೆರಾಜೆ ಬಳಿ ಶವ ಪತ್ತೆಯಾಯಿತು .