ಕ್ರೈಂವೈರಲ್ ನ್ಯೂಸ್

ದಸರಾದ ಆನೆಯನ್ನು ಸಾಗಿಸುತ್ತಿದ್ದ ಲಾರಿ ಅಪಘಾತ..! ಚಾಲಕನ ಮೇಲೆ ಲಾರಿ ಹರಿದದ್ದೇಗೆ?

173

ನ್ಯೂಸ್ ನಾಟೌಟ್: ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿಯ ದಸರಾ ಅಂಬಾರಿ ಹೊತ್ತಿದ್ದ ಆನೆಯ ವಾಹನ ಹಳ್ಳಕ್ಕೆ ಹರಿದು ಲಾರಿ ಚಾಲಕ ಸಾವನ್ನಪ್ಪಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ ಸಾನಮಾವು ಬಳಿ ಹೊಸೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಚಾಲಕನನ್ನು ಆರೋಗ್ಯಸ್ವಾಮಿ(45) ಎಂದು ಗುರುತಿಸಲಾಗಿದೆ. ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ತೆರಳಿದ್ದಾಗ ಗಟನೆ ನಡೆದಿದೆ. ವಾಹನ ನಿಲ್ಲಿಸಿದ್ದ ಪ್ರದೇಶ ಇಳಿಜಾರಾಗಿದ್ದ ಕಾರಣ ವಾಹನ ಏಕಾಏಕಿ ಮುಂದಕ್ಕೆ ಚಲಿಸಿ ಹೋಗಲು ಆರಂಭಿಸಿದೆ. ತಡೆಯಲು ಮುಂದಾದ ಚಾಲಕನ ಮೇಲೆ ಲಾರಿ ಹರಿದಿದೆ ಎನ್ನಲಾಗಿದೆ.‌

ವಾಹನದಲ್ಲಿದ್ದ ಇತರ ಆರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಹೊಸೂರಿನ ಅಡ್ಕೋ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಧಾವಿಸಿದ್ದು, ಕ್ರೇನ್ – ಜೆಸಿಬಿ ಮೂಲಕ ಲಾರಿಯನ್ನು ಹೊರಕ್ಕೆ ಎಳೆಯಲಾಗಿದೆ ಎಂದು ವರದಿ ತಿಳಿಸಿದೆ. ಆನೆ ಸುರಕ್ಷಿತವಾಗಿದ್ದು, ಗಾಯಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ.

https://www.youtube.com/watch?v=91Tc8e4avZ8
See also  ಗಂಡ ಮತ್ತು ಮಗುವಿನ ಮುಂದೆ ತನಗೆ ತಾನೇ ಅಂತ್ಯಕ್ರಿಯೆ ಮಾಡಿಕೊಂಡ ಮಹಿಳೆ..! ಎನಿದು ವಿಚಿತ್ರ ಘಟನೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget