ಕ್ರೈಂವೈರಲ್ ನ್ಯೂಸ್ಸಿನಿಮಾ

ದರ್ಶನ್ ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದಂತೆ ಶಾಸ್ತ್ರಿ ಸಿನಿಮಾ ರೀ-ರಿಲೀಸ್..! ಕಾರಾಗೃಹದಲ್ಲಿ ಊಟಕ್ಕೆ ಚಿಕನ್, ಚಪಾತಿ, ಮುದ್ದೆ, ಸಾಂಬಾರ್, ಮಜ್ಜಿಗೆ..!

162

ನ್ಯೂಸ್ ನಾಟೌಟ್: ಜೈಲಿನ ಕಾನೂನು ಉಲ್ಲಂಘನೆ ಆರೋಪದಲ್ಲಿ ಪರಪ್ಪನ ಅಗ್ರಹಾರದಿಂದ ಗುರುವಾರ(ಆ.29) ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದರ್ಶನ್ ಜೈಲಿನಲ್ಲಿ ಒಂದು ದಿನ ಕಳೆದಿದ್ದಾರೆ.

ಗುರುವಾರ ರಾತ್ರಿ ಊಟಕ್ಕೆ ರಾಗಿ ಮುದ್ದೆ ಜೊತೆಗೆ ಅನ್ನ ಸಾಂಬಾರ್ ನೀಡಲಾಗಿದ್ದು ಎನ್ನಲಾಗಿದೆ. ಜೈಲು ಸಿಬಂದಿ 7.30ಗೆ ಉಪಾಹಾರ ನೀಡಿದ್ದಾರೆ.
ಬೆಳಗಿನ‌ ಉಪಾಹಾರಕ್ಕೆ ಚಿತ್ತನ್ನ, ಪುಳಿವೊಗರೆ, ಅವಲಕ್ಕಿ, ವಾಂಗಿ ಭಾತ್, ಟೊಮೆಟೊ ಬಾತ್, ಉಪ್ಪಿಟ್ಟು ಹೀಗೆ ಪ್ರತಿದಿನ ಒಂದೊಂದರಂತೆ ಮಾಡಲಾಗುತ್ತದೆ. ಅದೇ ರೀತಿ ಇಂದು ಮಧ್ಯಾಹ್ನದ ಊಟಕ್ಕೆ ಚಿಕನ್, ಚಪಾತಿ, ಮುದ್ದೆ, ಸಾಂಬಾರ್ ಮಜ್ಜಿಗೆ ಕೊಡಲಿದ್ದಾರೆ.

ಈ ನಡುವೆ ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ಶಾಸ್ತ್ರಿ ಶುಕ್ರವಾರ ರೀ-ರಿಲೀಸ್ ಆಗುತ್ತಿದೆ. ಅದರಂತೆ ಬಳ್ಳಾರಿಯ ರಾಘವೇಂದ್ರ ಟಾಕೀಸ್ ನಲ್ಲಿ ದರ್ಶನ್ ನಟನೆಯ ಸಿನಿಮಾ ಪ್ರದರ್ಶನವಾಗುತ್ತಿದೆ. ಬೆಳಿಗ್ಗೆ 10.30ಕ್ಕೆ ಮೊದಲ ಶೋ ಆರಂಭ ಆಗಿದೆ.

Click

https://newsnotout.com/2024/08/father-and-son-kannada-news-police-investigation-and-treatment/
https://newsnotout.com/2024/08/premaloka-actress-kannada-news-kannada-news-hurun-list/
https://newsnotout.com/2024/08/arun-kumar-puttila-kannada-news-viral-audio-k-police-station-puttur/
https://newsnotout.com/2024/08/interesting-story-of-lovers-in-the-car-romance-got-chill/
https://newsnotout.com/2024/08/narendra-modi-invited-from-pakisthan-kannada-news-islamabad/
See also  ದರ್ಶನ್ ಜಾಮೀನಿಗೆ ಶ್ಯೂರಿಟಿ ಹಾಕಿದ ನಟ ಧನ್ವೀರ್‌..! ಕೋರ್ಟ್ ದರ್ಶನ್ ಗೆ ವಿಧಿಸಿದ ಷರತ್ತುಗಳೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget