ಕ್ರೀಡೆ/ಸಿನಿಮಾಬೆಂಗಳೂರುವೈರಲ್ ನ್ಯೂಸ್

ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಣೆ, ಚಾಲೆಂಜಿಂಗ್ ಸ್ಟಾರ್ ಮಾಡಿದ್ದ ಆ ಒಂದು ಮನವಿ ಏನು..?

185
PC Cr: Public tv kannada

ನ್ಯೂಸ್‌ ನಾಟೌಟ್‌ : ಚಾಲೆಂಜಿಂಗ್ ಸ್ಟಾರ್ ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ, ತುರಾಯಿ ತರದೇ ದಿನಸಿ ಸಾಮಾಗ್ರಿಗಳನ್ನು ನೀಡುವಂತೆ ಅಭಿಮಾನಿಗಳಿಗೆ ಕರೆಕೊಟ್ಟಿದ್ದರು.

ಅದರಂತೆ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ದಿನಸಿ ನೀಡಿದ್ದರು. ಆ ದಿನಸಿಗಳನ್ನು ಇಂದು ಪೌರಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಪ್ರತಿ ವರ್ಷವೂ ದಿನಸಿಗಳನ್ನು ತಂದುಕೊಂಡುವಂತೆ ದರ್ಶನ್ ಮನವಿ ಮಾಡುತ್ತಾರೆ. ಅಕ್ಕಿ, ಬೆಳೆ ಸೇರಿದಂತೆ ಅಭಿಮಾನಿಗಳು ಕೊಟ್ಟ ದಿನಸಿಗಳನ್ನು ಕೆಲ ವರ್ಷಗಳ ಕಾಲ ಸಿದ್ಧಗಂಗಾ ಮಠಕ್ಕೆ ನೀಡಿದ್ದರು.

ಜೊತೆಗೆ ಅನಾಥಾಶ್ರಮಗಳಿಗೂ ಕಳುಹಿಸಿಕೊಟ್ಟಿದ್ದರು. ಈ ಬಾರಿ ಪೌರಕಾರ್ಮಿಕರ ಹಂಚಿದ್ದಾರೆ. ಫೆ.16ರಂದು ಅಭಿಮಾನಿಗಳ ಸಮ್ಮುಖದಲ್ಲಿ ಮನೆ ಮುಂದೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರೆ, 17ನೇ ತಾರೀಖು ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ಬೆಳ್ಳಿ ಪರ್ವ ಕಾರ್ಯಕಮ ನಡೆಯಿತು. ಇದರ ಜೊತೆಗೆ ದರ್ಶನ್ ನಟನೆಯ ಕಾಟೇರ ಸಿನಿಮಾ ನಿನ್ನೆಗೆ 50 ದಿವಸಗಳನ್ನು ಪೂರೈಸಿದೆ.

See also  ಅಪ್ರಾಪ್ತ ಬಾಲಕಿಯ ಮೇಲೆ ಸ್ವಯಂಘೋಷಿತ ದೇವಮಾನವನಿಂದ ಲೈಂಗಿಕ ದೌರ್ಜನ್ಯ! ಯಾರು ಈ ಸ್ವಯಂಘೋಷಿತ ಸ್ವಾಮಿ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget