ಕ್ರೈಂವೈರಲ್ ನ್ಯೂಸ್ಸಿನಿಮಾ

ದರ್ಶನ್ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಬಿಗ್ ಬಾಸ್ ವಿನ್ನರ್ ಪ್ರಥಮ್ ಗೆ ಜೀವ ಬೆದರಿಕೆ..! ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಪ್ರಥಮ್

172

ನ್ಯೂಸ್ ನಾಟೌಟ್: ‘’ಬಿಗ್ ಬಾಸ್’ ಪ್ರಥಮ್‌ ಗೆ ದರ್ಶನ್ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿದೆ. ಈ ವಿಚಾರವಾಗಿ ಪ್ರಥಮ್, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದರ್ಶನ್ ಪ್ರಕರಣದ ವಿಚಾರವಾಗಿ ಇತ್ತೀಚೆಗೆ ಪ್ರಥಮ್ ಧ್ವನಿಯೆತ್ತಿದ್ದರು, ಯಾರೂ ಬಾಸ್ ಅಂತ ತಲೆ ಮೇಲೆ ಇಟ್ಟುಕೊಳ್ಬೇಡಿ, ಯಾರೇ ಆದ್ರು ಅಪರಾಧಿಯಾಗಿದ್ರೆ ಅಪರಾಧಿಯೇ ಎಂದು ಪ್ರಥಮ್ ಹೇಳಿದ್ದರು. ಇದು ದರ್ಶನ್ ಫ್ಯಾನ್ಸ್‌ ಅನ್ನು ಕೆರಳಿಸಿತ್ತು. ಬಳಿಕ ಪ್ರಥಮ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು.

ಈ ಬಗ್ಗೆ ಪ್ರಥಮ್ ಮಾತನಾಡಿ, ಕಳೆದ ಎರಡ್ಮೂರು ದಿನಗಳಿಂದ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಸಿನಿಮಾ ಶೂಟಿಂಗ್ ಮಾಡೋಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಯಾರಿಗೂ ಯಾರು ಬಾಸ್ ಅಲ್ಲ. ಬಾಸ್ ಎನ್ನಬೇಡಿ ತಲೆಗೆ ಹತ್ತುತ್ತದೆ. ನಿಮಗೆ ನಿಮ್ಮ ತಂದೆ ತಾಯಿಗಳು ಬಾಸ್ ದುಡಿದು ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆ ಅಲ್ಲಿ ನಿಂತು ಟೈಮ್ ವೇಸ್ಟ್ ಮಾಡಿಕೊಳ್ತಿರಾ ಅದೇ ಟೈಮ್ ಬೇರೆ ಕಡೆ ಹಾಕಿ ಉಪಯೋಗಿಸಿಕೊಳ್ಳಿ ಎಂದಿದ್ದಾರೆ. ಯಾರು ಯಾರಿಗೋಸ್ಕರನೋ ಜೈಲಿಗೆ ಹೋಗಬೇಡಿ. ಸ್ಟೇಷನ್ ಹತ್ತಿರ ಅಲ್ಲ ಕೂಗೋದು. ಥಿಯೇಟರ್ ಹತ್ತಿರ ಹೋಗಿ ಕೂಗಿ ಸಿನಿಮಾಗಾದರೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.

Click 👇

https://newsnotout.com/2024/06/darshan-and-gang-internal-matter-revealed-to-police
https://newsnotout.com/2024/06/vijayalakshmi-wife-of-darshan-kannada-news-legal-fight-kannada-news
https://newsnotout.com/2024/06/darshan-thoogudeepa-and-vijayalakshimi-kannada-news-renuka-swami-issue
https://newsnotout.com/2024/06/uppinangady-hemavathi-case-sslc-student-accused-and-arrested
See also  ಕೋರ್ಟ್​ ಹಾಲ್ ​ನಲ್ಲಿ ದರ್ಶನ್ ಕೈ ಹಿಡಿದ ಪವಿತ್ರಾ..! ದರ್ಶನ್ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಿಕೆ..!
  Ad Widget   Ad Widget     Ad Widget   Ad Widget   Ad Widget   Ad Widget