ಕರಾವಳಿದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರಿನ ಕಚೇರಿ ನವೀಕೃತಗೊಂಡು ಶುಭಾರಂಭ, ಹಲವಾರು ಗಣ್ಯರ ಆಗಮನ, ಶುಭ ಹಾರೈಕೆ

146

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರಿನ ಕಚೇರಿಯು ಒಕ್ಕಲಿಗರ ಭವನದ 1ನೇ ಮಹಡಿಯಲ್ಲಿ ನವೀಕೃತಗೊಂಡು ಶುಭಾರಂಭಗೊಂಡಿದೆ.

ಆದಿಚುಂಚನಗಿರಿಯ ಶ್ರೀಗಳಾದ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಹಾಗೂ ಮಂಗಳೂರು ಶಾಖೆಯ ಶ್ರೀಗಳಾದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಕಚೇರಿಯು ಅ.5ರಂದು ಉದ್ಘಾಟನೆಗೊಂಡಿತು. ಬೆಳಗ್ಗೆ ಗಣಹೋಮ ಪೂಜಾ ಕಾರ್ಯಕ್ರಮ ನೆರವೇರಿತು.

ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ( ರಿ) ಮಂಗಳೂರಿನ ಅಧ್ಯಕ್ಷ ಡಿ.ಬಿ. ಬಾಲಕೃಷ್ಣ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎನ್. ಎ ಜ್ನಾನೇಶ್ ಎಲ್ಲರನ್ನೂ ಸ್ವಾಗತಿಸಿದರು.

ಉಪಾಧ್ಯಕ್ಷ ಭಾಸ್ಕರ ದೇವಸ್ಯ ,ಕೋಶಾಧಿಕಾರಿ ವಿಶ್ವನಾಥ ಗೌಡ ಪುತ್ತೂರು, ಜಂಟಿ ಕಾರ್ಯದರ್ಶಿ ದಾಮೋದರ್ ಗೌಡ, ಜಂಟಿ ಕೋಶಾಧಿಕಾರಿ ಸೂರಜ್ ಕುಮಾರ್ ಯು., ಪ್ರಧಾನ ಸಂಚಾಲಕ ರಕ್ಷಿತ್ ಪುತ್ತಿಲ, ಗೌರವಾನ್ವಿತ ನಿರ್ಧೆಶಕರುಗಳಾದ ವಿಜಯ ಗೌಡ ಬೆಳ್ತಂಗಡಿ , ಅನೂಪ್ ನರಿಯೂರು , ಡಾ.ಶಾಂತರಾಜ್ , ಲಿಂಗಯ್ಯ ಮಂಗಳೂರು, ವಿಶ್ವನಾಥ ನಾಯ್ತೊಟ್ಟು , ಮಧುರ ಜಗದೀಶ್ ಹಾಗೂ ಸಮುದಾಯದ ಪ್ರಮುಖರಾದಂತಹ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಥಾಪನ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು , ವಕೀಲ ನವೀನ್ ಚಿಲ್ಪಾರ್ , ನಿವೃತ್ತ ಪ್ರೊಫೆಸರ್ ಗುರುದೇವ್ ಯು ಬಿ, ಕೃಷ್ಣಪ್ಪ ಗೌಡ ಸುರತ್ಕಲ್ , ತಾರಸಿ ಕೃಷಿಕ ಖ್ಯಾತಿಯ ಕೃಷ್ಣಪ್ಪ ಪಡ್ಡಂಬೈಲ್, ಮಹೇಶ್ ಮೋಂಟಡ್ಕ, ಸುಂದರ ಜಿ ಯಚ್ , ಮಹೇಶ್ ನಡುತೋಟ, ಕೃಷ್ಣವೇಣಿ ಬಾಲಕೃಷ್ಣ ರಾಮಚಂದ್ರ ಗೌಡ ಮತ್ತಿರರ ಗಣ್ಯರು ಉಪಸ್ಥಿತರಿದ್ದರು.

Click

https://newsnotout.com/2024/10/police-station-kannada-news-fire-issue-viral-news/
https://newsnotout.com/2024/10/kota-shrinivas-poojari-kannada-news-fake-account-for-money-jd/
See also  ಸುಳ್ಯ: ಕುಂ ಕುಂ ಫ್ಯಾಶನ್‌ ನಲ್ಲಿ ಮಾನ್ಸೂನ್ ವಿಶೇಷ ಆಫರ್ಸ್ ಹಬ್ಬ,ಗ್ರಾಹಕರ ನೆಚ್ಚಿನ ಬಟ್ಟೆ ಮಳಿಗೆಯಲ್ಲಿ ನಿಮಗೊಪ್ಪುವ ಡ್ರೆಸ್ ಲಭ್ಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget