ಕರಾವಳಿ

ಅಪರಿಚಿತ ವ್ಯಕ್ತಿಯ ವಿಡಿಯೋ ಕರೆಯನ್ನು ನಂಬಿ 16 ಲಕ್ಷ ರೂ. ಕಳೆದುಕೊಂಡ ಪುತ್ತೂರಿನ ವೈದ್ಯರು!!,ವೈದ್ಯರಿಗೆ ಪಂಗನಾಮ ಹಾಕಿದ ಆ ಖತರ್ನಾಕ್ ವಂಚಕರು ಯಾರು? ಏನಿದು ಮೋಸದ ಜಾಲ?

127

ನ್ಯೂಸ್‌ ನಾಟೌಟ್‌: ಕೆಲ ವರ್ಷಗಳ ಹಿಂದೆಯೆಲ್ಲಾ ವಿದ್ಯಾವಂತರನ್ನು ಮೋಸ ಮಾಡೋದು ಸ್ವಲ್ಪ ಕಷ್ಟವಾಗುತ್ತಿತ್ತು.ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರನ್ನೇ ಮೋಸ ಮಾಡುವ ಜಾಲ ಹುಟ್ಟಿಕೊಂಡಿದೆ.ಬೆಣ್ಣೆ ಮಾತುಗಳನ್ನಾಡಿ ಪಾಸ್‌ ವರ್ಡ್‌ ಕೇಳೋ ವಂಚಕರು, ಅಕೌಂಟ್‌ ಹ್ಯಾಕ್‌ ಮೂಲಕ ಹಣ ಪೀಕಿಸುವ ಕಳ್ಳರ ಸಂಖ್ಯೆ ಜಾಸ್ತಿಯಾಗ್ಬಿಟ್ಟಿದೆ.ಹೀಗಾಗಿ ಎಷ್ಟೇ ವಿದ್ಯಾವಂತರಾದರೂ ಕೂಡ ಈಗಿನ ತಂತ್ರಜ್ಞಾನಗಳ ಬಗ್ಗೆಯೂ ತಿಳಿದುಕೊಳ್ಳೋದು ಅತಿ ಅವಶ್ಯಕವಾಗಿದೆ.

ಇದೀಗ ಇದಕ್ಕೆ ಸಂಬಂಧ ಪಟ್ಟ ಹಾಗೆ ಘಟನೆಯೊಂದು ಪುತ್ತೂರಿನಿಂದ ವರದಿಯಾಗಿದೆ. ದೂರವಾಣಿ ಕರೆ ಮಾಡಿ ಪುತ್ತೂರಿನ ಆಸ್ಪತ್ರೆಯ ವೈದ್ಯರೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ವಂಚಕರು ಸಿಬಿಐ ಕೋರ್ಟ್‌ ದೃಶ್ಯ ಸೃಷ್ಟಿಸಿ ನಂಬಿಸಿ ಕೃತ್ಯ ಎಸಗಿದ್ದಾರೆ ಎಂದು ವಂಚನೆಗೆ ಒಳಗಾಗಿರುವ ಬಗ್ಗೆ ದೂರು ನೀಡಿರುವ ವೈದ್ಯರೇ ಇದನ್ನು ಬಹಿರಂಗಪಡಿಸಿದ್ದಾರೆ.


ವೈದ್ಯರಿಗೆ ಮಾ. 28ರಂದು ಬೆಳಗ್ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಇದನ್ನು ನಂಬಿ ವೈದ್ಯರು 16 ಲಕ್ಷ ರೂ. ಪಾವತಿಸಿದ್ದರು.
ತಾವು ಸಿಬಿಐ ಪೊಲೀಸರೆಂದು ವೈದ್ಯರಿಗೆ ನಂಬಿಕೆ ಹುಟ್ಟುವಂತೆ ಮಾಡಲು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ವೈದ್ಯರ ವ್ಯಾಟ್ಸ್‌ಅಪ್‌ಗೆ ಅವರ ಪಾನ್‌, ಆಧಾರ್‌ ಮತ್ತಿತರ ದಾಖಲೆಗಳ ಫೋಟೋ, ಆಸ್ಪತ್ರೆಯ ಚಿತ್ರಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕೂಡ ರವಾನಿಸಿದ್ದು, ಹೀಗಾಗಿ ತಾನು ಆತಂಕಕ್ಕೆ ಒಳಗಾಗಿ ಹಣ ಪಾವತಿಸಿದೆ ಎಂಬ ಅಂಶವನ್ನು ವೈದ್ಯರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.


ಅಪರಿಚಿತರು ಎಷ್ಟು ಪಳಗಿದ್ದಾರೆ ಅಂದ್ರೆ ವೈದ್ಯರಿಗೆ ಅರಿವಿಗೆ ಬಾರದ ಹಾಗೆ ಅವರ ಪೋನ್‌ ಕರೆಗಳನ್ನು ಬ್ಲಾಕ್‌ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲಸ ಮಾಡುವ ಆಸ್ಪತ್ರೆಯ ಇತರ ಕೆಲವು ವೈದ್ಯರು ಅವರಿಗೆ ಕರೆ ಮಾಡಿದಾಗ “ನಾಟ್‌ ರೀಚಬಲ್‌’, “ಬ್ಯುಸಿ’ ಮೊದಲಾದ ಸಂದೇಶ ಬರುತ್ತಿತ್ತು ಎನ್ನಲಾಗಿದೆ. ಒಟ್ಟು ಅರ್ಧ ತಾಸಿನೊಳಗೆ ಮಾತುಕತೆ ನಡೆದು ವೈದ್ಯರು ಹಣ ಪಾವತಿಸಿಯೂ ಆಗಿತ್ತು.

ಎರಡನೇ ಬಾರಿಗೆ ಹಣದ ಬೇಡಿಕೆ ಬಂದಾಗ ವೈದ್ಯರು ತನ್ನ ಆಪ್ತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಇದೊಂದು ವಂಚಕರ ಜಾಲ ಆಗಿರಬಹುದು ಎಂದು ಅವರು ಸಲಹೆ ನೀಡಿದ್ದರೂ ಅದಾಗಲೇ ವೈದ್ಯರು ಹಣ ಪಾವತಿಸಿ ಆಗಿತ್ತು. ಜತೆಗೆ ಅಪರಿಚಿತ ವ್ಯಕ್ತಿಯು ವಾಟ್ಸ್‌ಆ್ಯಪ್‌ಮೂಲಕ ಕಳುಹಿಸಿದ ಎಲ್ಲ ದಾಖಲೆಪತ್ರಗಳು ಕೂಡ “ಡಿಲೀಟ್‌ ಫಾರ್‌ ಎವರಿವನ್‌’ ಆಗಿದ್ದವು ಎಂದು ಹೇಳಲಾಗಿದೆ.

ವಂಚಕರು ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿದ್ದರು.ತಾವು ದಿಲ್ಲಿ ಪೊಲೀಸರು ಎಂದು ನಂಬಿಸಿ 16.5 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ.ನಿಮ್ಮ ಮೇಲೆ ದಿಲ್ಲಿಯಲ್ಲಿ ಮಾದಕ ವಸ್ತು, ಅಕ್ರಮ ಹಣ, ಮಾನವ ಕಳ್ಳಸಾಗಾಟ ಕುರಿತು ಪ್ರಕರಣ ದಾಖಲಾಗಿದೆ ಎಂದು ನಂಬಿಸಿದ್ದು ಮಾತ್ರವಲ್ಲದೇ ಬಂಧಿಸುವಂತೆ ವಾರಂಟ್‌ ಕೂಡ ಆಗಿದೆ ಎಂದು ಹೇಳಿದ್ದರು.

See also  ಕಾರ್ಕಳ: ನೇಹಾ ಹತ್ಯೆ ಖಂಡಿಸಿ ಪ್ರತಿಭಟಿಸಿದ್ದಕ್ಕೆ ABVP ರಾಜ್ಯ ಸಹಕಾರ್ಯದರ್ಶಿಗಳ ಮೇಲೆ FIR, 'ಇದು ಕಾಂಗ್ರೆಸ್ ಗ್ಯಾರಂಟಿ' ಎಂದು ಸಿಡಿದ ಟೀಮ್ ABVP

ಹೀಗಾಗಿ ನೀವು ದಿಲ್ಲಿಯ ಸಿಬಿಐ ಕೋರ್ಟ್‌ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್‌ಲೈನ್‌ ಮೂಲಕ ಕೇಸ್‌ ನಡೆಸುತ್ತೇವೆ ಎಂದು ವಂಚಕ ಹೇಳಿದ್ದ. ಬಳಿಕ ವೀಡಿಯೋ ಕರೆ ಮಾಡಿ ಸಿಬಿಐ ಪೊಲೀಸರನ್ನು ಹೋಲುವ ವ್ಯಕ್ತಿಗಳನ್ನು ತೋರಿಸಿದ್ದ. ವೀಡಿಯೋ ಕರೆ ಮಾಡಿ ನ್ಯಾಯಾಧೀಶರು ಕುಳಿತಿರುವ ಕೋರ್ಟ್‌ ಸಭಾಂಗಣದ ದೃಶ್ಯಗಳನ್ನು ತೋರಿಸಿದ್ದ. ಇದರಿಂದ ನಿಜ ಇರಬಹುದು ಎಂದು ವೈದ್ಯರು ನಂಬಿದ್ದು ಲಕ್ಷಾಂತರ ರೂ. ಕಳೆದು ಕೊಳ್ಳುವಂತಾಗಿದೆ.

  Ad Widget   Ad Widget     Ad Widget   Ad Widget   Ad Widget   Ad Widget