ಕರಾವಳಿದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನೂತನ ಅಧ್ಯಕ್ಷರಾಗಿ ಭಾಸ್ಕರ ದೇವಸ್ಯ ಅವಿರೋಧ ಆಯ್ಕೆ, ಉಪಾಧ್ಯಕ್ಷರಾಗಿ ಸಂಜೀವ ಅಡ್ಯಾರ್ ಆಯ್ಕೆ

149

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನೂತನ ಅಧ್ಯಕ್ಷರಾಗಿ ಮಾತೃಭೂಮಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಫಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಪಂಪ್ ವೆಲ್ ನಲ್ಲಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್‌ ಕುಮಾರ್‌ ಎಂ.ಎಸ್‌, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು. ನಿರ್ದೇಶಕರಾಗಿ ವಲ್ಸರಾಜ್‌ ಎ(ಸ್ವಸ್ತಿಕ್‌ ಸೌಹಾರ್ದ), ಹರೀಶ ಪುತ್ತೂರಾಯ (ಶಿವಳ್ಳಿ ಸಂಪದ), ದೇವಿಪ್ರಸಾದ್‌ ಕೆ(ಶ್ರೀ ಸರಸ್ವತಿ ಕ್ರೆಡಿಟ್‌ ), ಸುಮಲತಾ ನವೀನ್‌ಚಂದ್ರ ಸುವರ್ಣ(ಶ್ರೀ ಗುರು ಸೌಹಾರ್ದ), ವಿನೋದರ ಪೂಜಾರಿ(ಭಾರತ್‌ ಸೌಹಾರ್ದ), ಗಣೇಶ್‌ ಶೆಣೈ(ಶ್ರೀ ಪೂರ್ಣಾನಂದ), ಲ್ಯಾನ್ಸಿ ಎ.ಪಿರೇರ(ಬೆಳ್ತಂಗಡಿ ಪ್ರೇರಣಾ ಸೌಹಾರ್ದ), ಅಮೃತ್ ರೈ.ಯು(ಸಮಷ್ಟಿ ಸೌಹಾರ್ದ), ಎಂ.ಎಸ್‌.ಗುರುರಾಜ್‌(ಶ್ರೀಶಾ), ಸುಧಾಕರ್‌(ಗ್ರಾಮ ಸಮೃದ್ಧಿ ಸೌಹಾರ್ದ), ದಾಮೋದರ ಕುಲಾಲ್ (ಶ್ರೀಮಾತಾ ಸೌಹಾರ್ದ), ಉರ್ಬಾನ್ ಪಿಂಟೋ(ಕರ್ನಾಟಕ ರಾಜ್ಯ ವಿದ್ಯುತ್‌ ಗುತ್ತಿಗೆದಾರರ ಸೌಹಾರ್ದ), ನಾರಾಯಣ ಶೆಟ್ಟಿ(ಶ್ರೀರಾಮ ಸೌಹಾರ್ದ), ಚಂದ್ರಶೇಖರ ಕುಮಾರ್‌(ಶ್ರೀ ಗುರುಶಕ್ತಿ), ಜಗದೀಶ್‌ ಕೆ.ಆರ್‌(ಮಂಗಳೂರು ನ್ಯಾಯವಾದಿಗಳ ಸೌಹಾರ್ದ), ಫ್ಲೇವಿ ಡಿಸೋಜ(ಪ್ರೇರಣಾ ಮಹಿಳಾ ವಿವಿಧೋದ್ದೇಶ) ಮತ್ತು ಸರ್ಫರಾಜ್‌(ಕಾರುಣ್ಯ ಸೌಹಾರ್ದ) ಅವರನ್ನು ಆಯ್ಕೆ ಮಾಡಲಾಯಿತು.

See also  ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಎಚ್‌ಪಿ ಎಚ್ಚರಿಕೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget