Latest

ಪುತ್ತೂರಿನ ಕಾಲೇಜಲ್ಲಿ ವಿದ್ಯಾರ್ಥಿಯಿಂದ ದೈವನರ್ತನ !!ವಿಡಿಯೋ ವೈರಲ್!ದೈವಾರಾಧಕರ ಆಕ್ರೋಶ

797

ನ್ಯೂಸ್‌ ನಾಟೌಟ್: ತುಳುನಾಡಿನ ಜನ(Tulunadu People) ದೈವಾರಾಧನೆಯನ್ನು(Daivaradhane) ಹೆಚ್ಚಾಗಿ ಆಚರಿಸಲು ದೈವಗಳ ಮೇಲಿನ ಭಯ-ಭಕ್ತಿಯೂ ಒಂದು ಕಾರಣವಾಗಿದೆ. ಯಾವ ರೀತಿ ತುಳುನಾಡಿನ ಪ್ರತಿಯೊಂದು ಕುಟುಂಬವು ದೈವಾರಾಧನೆಯೊಂದಿಗೆ ಜೋಡಿಸಿಕೊಂಡಿದೆಯೋ, ಅದೇ ರೀತಿ ದೈವದ ಚಾಕರಿ ಮಾಡುವ ಕುಟುಂಬಗಳೂ ದೈವ ಕಟ್ಟುವ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸುತ್ತವೆ. ಹೀಗಾಗಿ ದೈವ ನರ್ತನ ಅಂದ್ರೆ ಭಯ ಮತ್ತು ಭಕ್ತಿಯ ಮೇಲೆ ನಿಂತಿದೆ. ಇಂತಹ ದೈವಾರಾಧನೆಯು ಯಾವುದೇ ನಾಟಕ, ಸಿನಿಮಾ, ಧಾರವಾಹಿ, ಯಕ್ಷಗಾನದಲ್ಲೂ ಪ್ರದರ್ಶನ ಆಗಬಾರದು ಎಂದು ದೈವಾರಾಧಕರು ಹೇಳಿದ್ದರೂ ಕೂಡ ಮತ್ತೆ ಮತ್ತೆ ಮರುಕಳಿಸುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಇದೀಗ ಬಾರಿ ವೈರಲ್ ಆಗುತ್ತಿದೆ. ಪುತ್ತೂರಿನ (Puttur) ಖಾಸಗಿ ಕಾಲೇಜೊಂದರಲ್ಲಿ ದಶಮಾನೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ದೈವನರ್ತನ (Daiva Narthana) ಮಾಡಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ.ವೇದಿಕೆ ಮೇಲೆ ವಿದ್ಯಾರ್ಥಿಯೊಬ್ಬ ಜುಮಾದಿ ದೈವದ ವೇಷ ಧರಿಸಿ ನರ್ತನ ಮಾಡಿದ್ದಾನೆ.ಇದು ದೈವಾರಾಧಕರ ಅಸಮಾಧಾನಕ್ಕೆ ಕಾರಣವಾಗಿದೆ. ದೈವನರ್ತನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೈವಕ್ಕೆ ಅಪಮಾನ ಮಾಡಲಾಗಿದೆ ಎಂದು ಕಾಲೇಜಿನ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಆದರೆ ಈ ವಿಡಿಯೋ ಒಂದು ವರ್ಷದ ಹಿಂದಿನದು ಎಂದು ಹೇಳಲಾಗುತ್ತಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ ಎಂದು ಹೇಳಲಾಗಿದೆ. ಸಿನಿಮಾ (Cinema) ಮತ್ತು ನಾಟಕಗಳಲ್ಲಿ (Drama) ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಇಲ್ಲಿನ ದೈವಾರಾಧಕರು ಈ ಹಿಂದೆಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ (Dakshina Kannada DC) ಮನವಿ ಸಲ್ಲಿಸಿದ್ದರು. ಮುಂದೆ ಸಿನಿಮಾಗಳಲ್ಲಿ ದೈವಾರಾಧನೆ ಪ್ರದರ್ಶನ ಆದ್ರೆ ನಮ್ಮ ಹೋರಾಟದ ಸ್ವರೂಪ ತೀವ್ರಗೊಳ್ಳುತ್ತದೆ ಎಂದು ದೈವಾರಾಧಕರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

See also  ಮೈಸೂರು ಚಾಮುಂಡೇಶ್ವರಿ ದೇವಾಲಯದ ಸುತ್ತ-ಮುತ್ತ ವ್ಯಾಪಾರಕ್ಕೆ ನಿರ್ಬಂಧ..! ದೇವಾಲಯದ ಅಭಿವೃದ್ಧಿ ಪ್ರಾಧಿಕಾರದಿಂದ ಆದೇಶ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget