ಕಾಸರಗೋಡುಕ್ರೈಂಪುತ್ತೂರು

ಪುತ್ತೂರು: ತಮ್ಮನ ಕೊಲೆಗೈದ ಅಣ್ಣನ ಸೆರೆ

205

ನ್ಯೂಸ್‌ ನಾಟೌಟ್‌: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಸನಿಹದ ಕೊಮ್ಮಂಗಳದ ಕಳಾಯಿ ನಿವಾಸಿ ಪ್ರಭಾಕರ ನೋಂಡ(42) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಸಹೋದರ ಜಯರಾಮ ನೋಂಡನನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪ್ರಭಾಕರ ನೋಂಡ ಪ್ರತಿದಿನ ರಾತ್ರಿ ವೇಳೆ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಯಲ್ಲಿ ಮಲಗುತ್ತಿದ್ದರು. ಶನಿವಾರ ಬೆಳಗ್ಗೆ ತಾಯಿ ಬೇಬಿ ಪುತ್ರನನ್ನು ಕರೆಯಲು ತೆರಳಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ದೇಹದಲ್ಲಿ ಇರಿತದ ಗಾಯಗಳಿದ್ದವು. ಈ ಬಗ್ಗೆ ತಾಯಿ ದೂರು ನೀಡಿದಂತೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಭಾಕರ ನೋಂಡ ಅವರ ಮೃತದೇಹ ಶನಿವಾರ ನಸುಕಿನ ಜಾವ ಪತ್ತೆಯಾಗಿತ್ತು. ಅವರನ್ನು ಇರಿದು ಕೊಲೆಗೈದಿರುವುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

See also  4 ಲಕ್ಷ ರೂ.ಗೆ 7 ವರ್ಷದ ಬಾಲಕನ ಮಾರಾಟ..! ಬಾಲಕನ ತಂದೆ ಸೇರಿದಂತೆ ನಾಲ್ವರು ಅರೆಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget