ನ್ಯೂಸ್ ನಾಟೌಟ್: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2020ರಲ್ಲಿ ಕೈಲಾಸ ರಾಷ್ಟ್ರ ಘೋಷಿಸಿದ್ದರು. ಆದರೆ ಅದೆಲ್ಲಿದೆ ಅನ್ನೋ ಪ್ರಶ್ನೆ ಇತ್ತು. ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗವನ್ನು ಅವರ ಶಿಷ್ಯರೇ ಈಗ ಬಹಿರಂಗ ಮಾಡಿದ್ದಾರೆ.
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಎಲ್ಲಿದ್ದಾನೆ ಎಂಬುದರ ಕುರಿತು ಅಚ್ಚರಿಯ ಮಾಹಿತಿಯನ್ನ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದಲ್ಲಿ ಬಹಿರಂಗ ಆಗಿದೆ. ತಿರುವಣ್ಣಮಲೈ ಮಠದಿಂದ ಸ್ವಾಮಿ ನಿತ್ಯಾನಂದನ ನಿಷೇಧಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ನಿತ್ಯಾನಂದ ಸ್ವಯಂ ಘೋಷಿತ ರಾಷ್ಟ್ರ ಎಲ್ಲಿದೆ ಎಂಬ ಪ್ರಶ್ನೆಗೆ ಕೋರ್ಟ್ನಲ್ಲಿ ಉತ್ತರ ಸಿಕ್ಕಿದೆ.
ಇದುವರೆಗೂ ಕೈಲಾಸ ಎಲ್ಲಿದೆ ಎಂಬುದರ ಬಗ್ಗೆ ಭಾರೀ ಚರ್ಚೆ ನಡೆಯುತ್ತಿತ್ತು. ಈಗ ಅದೆಕ್ಕೆಲ್ಲಾ ಉತ್ತರ ಸಿಕ್ಕಿದ್ದು, ಪ್ರಸ್ತುತ ಆಸ್ಟ್ರೇಲಿಯಾ ಬಳಿ ಇದೆ ಎನ್ನಲಾಗಿದೆ. ಆಸ್ಟ್ರೇಲಿಯಾ ಬಳಿಯ ಯುಎಸ್ ಕೆ ಎಂಬ ಸ್ವಯಂ ಘೋಷಿತ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಕೈಲಾಸ ಸ್ಥಳದ ಕುರಿತು ನ್ಯಾಯಾಲಯವು ಸ್ವಾಮಿ ನಿತ್ಯಾನಂದನ ಅನುಯಾಯಿಗಳನ್ನ ಕೇಳಿದೆ. ಅಧಿನಾಮ ಮಠದಿಂದ ಅವರನ್ನ ನಿಷೇಧಿಸುವ ಏಕ-ನ್ಯಾಯಾಧೀಶರ ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆಯಲ್ಲಿ ನ್ಯಾ. ಎಸ್.ಎಂ ಸುಬ್ರಮಣ್ಯಂ, ಮಾರಿಯಾ ಕ್ಲೆಟ್ ವಿಭಾಗೀಯ ಪೀಠವು ನಿತ್ಯಾನಂದನ ಭೌತಿಕ ಸ್ಥಳದ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನ ಎತ್ತಿದೆ. ಅರ್ಜಿದಾರರು ಎಲ್ಲಿದ್ದಾರೆ ಅಂತ ಕೇಳಿದೆ.. ಇದಕ್ಕೆ ಸಿಕ್ಕ ಉತ್ತರ ಕೈಲಾಸ.. ಹಾಗಾದರೆ ಕೈಲಾಸ ಎಲ್ಲಿದೆ ಅಂತ ಕೋರ್ಟ್ ಕೇಳಿದೆ.. ಇದಕ್ಕೆ ನಿತ್ಯಾನಂದನ ಶಿಷ್ಯ ಅರಚನ ತಿರುಮಲ ಉತ್ತರಿಸಿದ್ದಾರೆ.. ಆಸ್ಟ್ರೇಲಿಯಾ ಬಳಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಇದೆ.. ಇದಕ್ಕೆ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ನಿತ್ಯಾನಂದ ಪರ ವಕಾಲತ್ತು ವಹಿಸಲು ಹೊಸ ವಕೀಲರನ್ನ ನೇಮಿಸಲು ಅನುಮತಿ ಕೋರಲಾಗಿದೆ. ಮನವಿಯನ್ನ ಸ್ವೀಕರಿಸಿದ ಕೋರ್ಟ್, ವಿಚಾರಣೆ ಮುಂದೂಡಿದೆ.. ಅದ್ಹೇನೆ ಇರಲಿ ಇಲ್ಲಿಂದ ಓಡಿ ಹೋದ ನಿತ್ಯಾನಂದ, ಈ ಮೊದ್ಲು ದಕ್ಷಿಣ ಅಮೆರಿಕಾದ ಇಕ್ವೇಡಾರ್ ಬಳಿಯ ಚಿಕ್ಕ ದ್ವೀಪ ಖರೀದಿಸಿ ಹೊಸ ರಾಷ್ಟ್ರ ಕಟ್ಟಲಾಗಿದೆ ಅನ್ನೋ ಸುದ್ದಿ ಇತ್ತು.. ಆದ್ರೆ ಈಗ ಆಸ್ಟ್ರೇಲಿಯಾ ಬಳಿ ಇದೆ ಎಂಬುದು ಗೊತ್ತಾಗಿದೆ.
ಸಾಲದ ಕಂತು ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣು ಮಗಳನ್ನು ಹೊತ್ತೊಯ್ದ ಫೈನಾನ್ಸ್ ಸಿಬ್ಬಂದಿ..! ಏನಿದು ಅಮಾನವೀಯ ಘಟನೆ..?