ಕರಾವಳಿ

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

363

ನ್ಯೂಸ್ ನಾಟೌಟ್ : ಕರೋನಾ ಇಂಜೆಕ್ಷನ್ ಪಡೆದುಕೊಂಡ ಮೇಲೆ ಕೈ ನೋವಿನಿಂದ ಕೆಲಸ ಮಾಡಲಾಗುತ್ತಿಲ್ಲ ಎಂದು ಮನನೊಂದು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯಗೆ ಶರಣಾದ ಘಟನೆ ಕಾರ್ಕಳದ ಕೌಡೂರು ಗ್ರಾಮದ ತಡ್ಪೆದೋಟ ಮನೆಯಲ್ಲಿ ನಡೆದಿದೆ. ಪ್ರದೀಪ್ ಪೂಜಾರಿ (37 ವ) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.  

ಪ್ರದೀಪ್ ಪೂಜಾರಿ ಸುಮಾರು 10 ವರ್ಷಗಳಿಂದ ಮುಂಬೈ ಮತ್ತು ಪೂನಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಕೌಡೂರಿನ ತಮ್ಮ ಸಹೋದರ ಉಮೇಶ ಪೂಜಾರಿ ಎಂಬವರೊಂದಿಗೆ ವಾಸವಾಗಿದ್ದರು. ಕಳೆದ ವರ್ಷ ಕರೋನಾ ಸಮಯದಲ್ಲಿ ಆತನ ಎಡಕೈಗೆ ಇಂಜೆಕ್ಷನ್ ನೀಡಿದ್ದು ಇದರಿಂದ ಕೈ ನೋವು ಆರಂಭವಾಗಿತ್ತು. ಅಲ್ಲದೆ ಪ್ರದೀಪ್ ಗೆ ಕೈ ನೋವಿನಿಂದ ಸರಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಇದೇ ವಿಚಾರದಲ್ಲಿ ಪ್ರದೀಪ್ ಮಾನಸಿಕವಾಗಿ ನೊಂದಿದ್ದು ಸೋಮವಾರ ಸಂಜೆ ತಮ್ಮ ಮನೆಯ ಪಕ್ಕದಲ್ಲಿರುವ ಹಾಡಿಯಲ್ಲಿ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ತೆಲುಗು ಚಿತ್ರ ನಟ  ಪವನ್ ಕಲ್ಯಾಣ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget