ಕ್ರೈಂ

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೊಡಗಿನ ಯುವತಿಯರು

209
Spread the love

ಮಡಿಕೇರಿ: ಇಬ್ಬರು ವಿದ್ಯಾವಂತ ಯುವತಿಯರು ಕೌಟುಂಬಿಕ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಬಿ ಶೆಟ್ಟಿಗೇರಿ ಗ್ರಾಮದಿಂದ ವರದಿಯಾಗಿದೆ.

ನಾಮೇರ ಉದಯ ಎಂಬುವವರ ಪುತ್ರಿಯರಾದ ದಮಯಂತಿ (20 ) ಹಾಗೂ ಹರ್ಷಿತಾ (18) ಎಂದು ಗುರುತಿಸಲಾಗಿದೆ. ಇಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ದಮಯಂತಿ ಹಳ್ಳಿಗಟ್ಟು ಸಿಇಟಿ ಕಾಲೇಜ್‌ನಲ್ಲಿ ಇಂಜೀನಿಯರಿಂಗ್ ಹಾಗೂ ಹರ್ಷಿತಾ ಕಾವೇರಿ ಗೋಣಿಕೊಪ್ಪ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

See also  ಬಂಟ್ವಾಳ: ಸರಣಿ ಕಳವು ಪ್ರಕರಣ - ಸಾರ್ವಜನಿಕರಿಂದ ದೂರು, ಆರೋಪಿಗಳ ಬಂಧನ
  Ad Widget   Ad Widget   Ad Widget