ಕ್ರೈಂವಿಡಿಯೋವೈರಲ್ ನ್ಯೂಸ್

ಮೂತ್ರ ವಿಸರ್ಜನೆ ಪ್ರಕರಣಕ್ಕೆ ರೋಚಕ ತಿರುವು..! ಸಂತ್ರಸ್ತನ ಕಾಲು ತೊಳೆದು ಕ್ಷಮೆ ಕೋರಿದ ಸಿಎಂ..! ಇಲ್ಲಿದೆ ವೈರಲ್ ವಿಡಿಯೋ

193

ನ್ಯೂಸ್‌ ನಾಟೌಟ್‌: ಬಿಜೆಪಿ ಯುವ ನಾಯನ ಎಮದು ಹೇಳಲಾದ ಒಬ್ಬ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಪ್ರಕರಣದಲ್ಲಿ, ಸಂತ್ರಸ್ತನ ಕಾಲುಗಳನ್ನು ತೊಳೆಯುವ ಮೂಲಕ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕ್ಷಮೆ ಕೇಳಿದ್ದಾರೆ.

ಬಿಜೆಪಿ ಶಾಸಕನ ಸಹವರ್ತಿ ಎನ್ನಲಾದ ಪ್ರವೇಶ್ ಶುಕ್ಲಾ ಎಂಬಾತನಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಕಾರ್ಮಿಕ ದಶ್ಮತ್ ರಾವತ್‌ನನ್ನು ಭೋಪಾಲ್‌ನಲ್ಲಿನ ತಮ್ಮ ನಿವಾಸಕ್ಕೆ ಗುರುವಾರ ಕರೆಯಿಸಿಕೊಂಡ ಶಿವರಾಜ್ ಸಿಂಗ್ ಚೌಹಾಣ್, ಆತನ ಕಾಲುಗಳನ್ನು ತೊಳೆದಿದ್ದಾರೆ. ಆರೋಪಿ ಶುಕ್ಲಾನನ್ನು ಬಂಧಿಸಿದ ಬೆನ್ನಲ್ಲೇ, ಸಿಧಿ ಜಿಲ್ಲೆಯಲ್ಲಿರುವ ಆತನ ಅಕ್ರಮ ನಿರ್ಮಾಣದ ಕಟ್ಟಡವನ್ನು ಚೌಹಾಣ್ ಆದೇಶದಂತೆ ಅಧಿಕಾರಿಗಳು ಬುಲ್ಡೋಜರ್ ಮೂಲಕ ತೆರವುಗೊಳಿಸಿದ್ದರು.

ರಾವತ್ ಕಾಲುಗಳನ್ನು ತೊಳೆದ ಚೌಹಾಣ್, ಆತನಿಗೆ ಹೂವಿನ ಹಾರ ಹಾಕಿ ಗೌರವಿಸಿದ್ದಾರೆ. ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ ಸಿಎಂ, ಅದಕ್ಕಾಗಿ ರಾವತ್ ಕ್ಷಮೆಯಾಚಿಸಿದ್ದಾರೆ. ಬಳಿಕ ಸ್ಮಾರ್ಟ್ ಸಿಟಿ ಪಾರ್ಕ್‌ಗೆ ರಾವತ್‌ ನನ್ನು ಕರೆದುಕೊಂಡು ಹೋದ ಚೌಹಾಣ್, ಆತನೊಂದಿಗೆ ಗಿಡ ನೆಟ್ಟಿದ್ದಾರೆ.

ಕಾರ್ಮಿಕನನ್ನು ಭೇಟಿಯಾಗುವುದಕ್ಕೂ ಮುನ್ನ ಬುಧವಾರ ಮಾತನಾಡಿದ್ದ ಚೌಹಾಣ್, ವಿಡಿಯೋ ವೀಕ್ಷಿಸಿದ ಬಳಿಕ ತಮ್ಮ ಮನಸ್ಸಿಗೆ ಬಹಳ ಆಘಾತವಾಗಿದ್ದು, ನೋವಾಗಿದೆ. ಸಂತ್ರಸ್ತ ಹಾಗೂ ಆತನ ಕುಟುಂಬವನ್ನು ಭೋಪಾಲ್‌ನಲ್ಲಿ ಭೇಟಿ ಮಾಡುವುದಾಗಿ ಹೇಳಿದ್ದರು. “ಆತ (ಪ್ರವೇಶ್) ಮಾನವೀಯತೆಗೆ ಕಳಂಕ. ಅಮಾನವೀಯ ಕೃತ್ಯ ಎಸಗಿದ್ದಾನೆ. ಇದು ಅತ್ಯಂತ ಕಠಿಣ ಶಿಕ್ಷೆಯೂ ಸಾಲದಂತಹ ಅಪರಾಧ. ಆದರೆ ಆರೋಪಿಗೆ ತೀವ್ರ ಕಠಿಣ ಶಿಕ್ಷೆ ನೀಡುವಂತೆ ನಾನು ಸೂಚನೆ ನೀಡಿದ್ದೇನೆ. ಇದು ಎಲ್ಲರಿಗೂ ನೈತಿಕ ಪಾಠವಾಗಲಿ. ನಾವು ಆತನನ್ನು ಬಿಡುವುದಿಲ್ಲ” ಎಂದು ತಿಳಿಸಿದ್ದರು. ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾರ್ಮಿಕ ದಶ್ಮತ್ ರಾವತ್‌ ಮೇಲೆ ಶುಕ್ಲಾ ಮೂತ್ರ ವಿಸರ್ಜನೆ ಮಾಡುವ ವಿಕೃತ ಪ್ರದರ್ಶನದ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

See also  ಪಾಕ್ ಗೆ ನುಗ್ಗಿ ಹೊಡೆದ ಭಾರತ..! ಆಪರೇಷನ್ ಸಿಂಧೂರ್ ​ಗೆ 9 ಉಗ್ರರ ನೆಲೆಗಳು ಧ್ವಂಸ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget