ಬೆಂಗಳೂರುರಾಜಕೀಯ

ವಾಸ್ತು ಇಲ್ಲ ಏನೂ ಇಲ್ಲ ಎಂದು ವಿಧಾನ ಸೌಧದ ಸಿಎಂ ಕಚೇರಿ ಬಾಗಿಲು ತೆರೆದು ಮೂಡನಂಬಿಕೆಯ ಕಿತ್ತೊಗೆದ ಸಿಎಂ ಸಿದ್ದರಾಮಯ್ಯ..! ಪಶ್ಚಿಮ ದ್ವಾರದಲ್ಲಿ ಅಂಥದ್ದೇನಿದೆ?

181

ನ್ಯೂಸ್ ನಾಟೌಟ್: ವಿಧಾನ ಸೌಧದಲ್ಲಿ ಮೂಡ ನಂಬಿಕೆಯನ್ನು ಕಿತ್ತೊಗೆಯುವ ಮೂಲಕ ಸಿಎಂ ಸಿದ್ದರಾಮಯ್ಯ ವಿನೂತನ ಹೆಜ್ಜೆ ಇಟ್ಟಿದ್ದಾರೆ.
ವಾಸ್ತು ಸರಿ ಇಲ್ಲ ಎಂದು ವಿಧಾನಸೌಧದಲ್ಲಿರುವ ಸಿಎಂ ಕಚೇರಿಯಲ್ಲಿದ್ದ ಪಶ್ಚಿಮ ದ್ವಾರವನ್ನು ಬಂಧ್ ಮಾಡಲಾಗಿತ್ತು. ಇದು ಇದುವರೆಗೆ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿರಲಿಲ್ಲ.

ಶನಿವಾರ ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಈ ವೇಳೆ ಅಧಿಕಾರಿಗಳ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಯಾಕೆ ಈ ಬಾಗಿಲು ಬಂದ್ ಮಾಡಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಸಿಎಂ ಪ್ರಶ್ನೆಗೆ ಅಧಿಕಾರಿಗಳು ವಾಸ್ತು ಕಾರಣದಿಂದ ಬಂದ್ ಮಾಡಿದ್ದೇವೆ ಎಂದು ಹೇಳಿದರು. ಈ ಕೂಡಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರಯ ಯಾವ ವಾಸ್ತೂ ಕೂಡ ಇಲ್ಲ. ಪಶ್ಚಿಮ ದ್ವಾರ ತೆರೆಯಿರಿ ಎಂದು ಆದೇಶಿಸಿದರು. ಬಳಿಕ ಬಾಗಿಲು ತೆರೆದಾಗ ಸಿದ್ದರಾಮಯ್ಯ ಪಶ್ಚಿಮ ದ್ವಾರದ ಮೂಲಕವೇ ತಮ್ಮ ಕಚೇರಿ ಪ್ರವೇಶಿಸಿದರು. ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಒಳ್ಳೆಗಾಳಿ ಬೆಳಕು ಬಂದರೆ ಉತ್ತಮ ವಾಸ್ತು ಎಂದಿದ್ದಾರೆ.

See also  HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಮತ್ತೆ ದಿನಾಂಕ ವಿಸ್ತರಣೆ..! ಇದೀಗ 5ನೇ ಬಾರಿಗೆ ಗಡುವು ನೀಡಿದ ಸಾರಿಗೆ ಇಲಾಖೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget