ರಾಜಕೀಯವೈರಲ್ ನ್ಯೂಸ್

‘ಹುಡುಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ’ ಎಂದು ಹೇಳಿದ್ದೇಕೆ ಸಿ.ಎಂ ಇಬ್ರಾಹಿಂ? ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಗುಟ್ಟು ಬಿಟ್ಟುಕೊಟ್ಟರಾ ಜೆಡಿಎಸ್ ರಾಜ್ಯಾಧ್ಯಕ್ಷ?

199

ನ್ಯೂಸ್ ನಾಟೌಟ್ : ಹುಡುಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟ ಪಡ್ತಾರೆ. ಹಾಗೇ ಬಿಜೆಪಿ (BJP) ಕೂಡ ಮೈತ್ರಿ ವಿಚಾರ ಚರ್ಚೆ ಹಂತದಲ್ಲಿದ್ದು, ಭಾನುವಾರ (ಸೆ.೯) ಕಾರ್ಯಕರ್ತರ ಮುಂದೆ ಚರ್ಚಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿಂದು ಜೆಡಿಎಸ್ (JDS) ಪಕ್ಷದ ಮಹತ್ವದ ಸಭೆ ನಡೆಯುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಸಭೆ ನಡೆದಿದೆ. ಜೆಡಿಎಸ್ ಹಾಲಿ, ಮಾಜಿ ಶಾಸಕರು, ಜಿಲ್ಲಾ, ತಾಲೂಕು, ಬೂತ್‌ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಇದೇ ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ (BJP-JDS Alliance) ವಿಷಯವನ್ನ ಚರ್ಚಿಸಲಾಗಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಇವತ್ತಿನ ಸಮಾವೇಶದಲ್ಲಿ ಪಕ್ಷ ಬಲ ಪಡಿಸುವ ಬಗ್ಗೆ ಚರ್ಚೆ ಮಾಡ್ತೀವಿ. ಪಕ್ಷದ ಮಟ್ಟದಲ್ಲಿ ದೋಸ್ತಿ ಬಗ್ಗೆ ಈವರೆಗೆ ಚರ್ಚೆ ಆಗಿಲ್ಲ. ನಮ್ಮ ಪಕ್ಷ ಉಳಿಯಬೇಕು. ರಾಜ್ಯಕ್ಕೆ 3ನೇ ಶಕ್ತಿ ಬೇಕು. ಬಡ ವರ್ಗ, ದಲಿತ ವರ್ಗಕ್ಕೆ ಒಂದು ಪಕ್ಷ ಬೇಕು. ಅದಕ್ಕಾಗಿ ಜಿಲ್ಲಾ ತಾಲೂಕು ಮಟ್ಟದ ಮುಖಂಡರು ಇವತ್ತಿನ ಸಭೆಗೆ ಹಾಜರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೈತ್ರಿ ಬಗ್ಗೆ ಎಲ್ಲರೂ ಹೇಳ್ತಿದ್ದಾರೆ. ನಾವ್ಯಾರೂ ಇನ್ನೂ ಅದರ ಬಗ್ಗೆ ನಿರ್ಧಾರ ಮಾಡಿಲ್ಲ. ಪಕ್ಷದ ಪ್ರತಿಯೊಬ್ಬರಿಂದಲೂ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ. ಬಿಜೆಪಿ ಅವರು ನಮಗೆ ಆಫರ್ ಕೊಡ್ತಿದ್ದಾರೆ. 4 ಸೀಟು ಅಂತ ನಾವು ಹೇಳಿಲ್ಲ, ಅವರೇ ಹೇಳ್ತಿದ್ದಾರೆ. ಆದ್ರೆ ದೋಸ್ತಿ ಬಗ್ಗೆ ನಾನು, ಕುಮಾರಸ್ವಾಮಿ ತೀರ್ಮಾನ ಮಾಡೋಕೆ ಸಾಧ್ಯವಿಲ್ಲ. ದೇವೇಗೌಡರು ಇದ್ದಾರೆ, ಕೋರ್ ಕಮಿಟಿ ಇದೆ.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡುತ್ತೇವೆ, ಹುಡುಗಿ ನೋಡಲು ಬಂದಿದ್ದಾರೆ, ಎರಡು ಕಡೆಯಿಂದಲೂ ಒಪ್ಪಿದರೆ, ಹುಡುಗಿ ಚೆನ್ನಾಗಿದ್ದರೆ ಎಲ್ಲರೂಇಷ್ಟಪಡ್ತಾರೆ ಎಂದು ಹೇಳಿದ್ದಾರೆ.

See also  ಕೊಯನಾಡಿನಲ್ಲಿ KSRTC ಸಿಟಿ ಬಸ್ ಟರ್ನ್ ಕಿರಿ..ಕಿರಿ..! ಬಸ್ ಉದ್ದವೇ ಟರ್ನ್ ಹೊಡೆಯೋಕೆ ಕಾರಣವಂತೆ..! ಏನಿದು ಒಂದು ಯೂ ಟರ್ನ್ ಕಥೆ..? ಇಲ್ಲಿದೆ ಡಿಟೇಲ್ಸ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget