Latestಸಿನಿಮಾ

ನೀವು ಕನ್ನಡ ಸಿನಿಮಾ ನೋಡದಿದ್ರೆ ನಾವು ಬೇರೆ ಕಡೆಗೆ ಹೋಗಲ್ಲ ಎಂದ ನಟ ದರ್ಶನ್..! ಪ್ಯಾನ್-ಇಂಡಿಯಾ ಸಿನಿಮಾಗಳ ಬಗ್ಗೆ ದಾಸನ ಅಸಮಾಧಾನ..!

495

ನ್ಯೂಸ್‌ ನಾಟೌಟ್: ಪ್ಯಾನ್‌ ಇಂಡಿಯಾ ಕ್ರೇಜ್‌ ಮಧ್ಯೆಯೂ ದರ್ಶನ್‌ ಕನ್ನಡ ಸಿನಿಮಾಕ್ಕಾಗಿ ಮಾತ್ರ ನಾನು ನಟಿಸುತ್ತೇನೆ ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಈಗ ಮತ್ತೂಮ್ಮೆ ಕನ್ನಡ ಪ್ರೇಕ್ಷಕರಲ್ಲಿ ಕನ್ನಡ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.
ಅದಕ್ಕೆ ಕಾರಣವಾಗಿರುವುದು “ವಾಮನ’. ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಮಾತನಾಡಿದ ದರ್ಶನ್‌ ಕನ್ನಡ ಸಿನಿಮಾಗಳನ್ನು ನೋಡುವಂತೆ ಮನವಿ ಮಾಡಿದರು.

“ದಯಮಾಡಿ ಕನ್ನಡ ಸಿನಿಮಾಗಳನ್ನು ಬೆಳೆಸಿ. ಯಾಕೆಂದರೆ, ಎಲ್ಲರೂ ಎಲ್ಲ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದರೆ ನಾವು ಕೆಲವರು ಮಾತ್ರ ಕನ್ನಡಕ್ಕೆ ಸೀಮಿತ ಎಂದುಕೊಂಡಿರುತ್ತೇವೆ. ಕನ್ನಡ ಸಿನಿಮಾ ನೋಡಲಿಲ್ಲ ಎಂದರೆ ನಾವು ಇಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗಲ್ಲ. ನೀವು ಕೊಟ್ಟ ಆಶೀರ್ವಾದದಿಂದ ತೋಟ, ಹಸು ಮಾಡಿಕೊಂಡಿದ್ದೇವೆ. ಯಾವತ್ತಿದ್ದರೂ ನಾವು ಕನ್ನಡದಲ್ಲೇ ಸಿನಿಮಾ ಮಾಡುವುದು. ಈ ಚಿತ್ರರಂಗ ಬಿಟ್ಟು ನಮಗೆ ಬೇರೆ ಗೊತ್ತಿಲ್ಲ.

ನಾವು ನಂಬಿಕೊಂಡಿರುವುದೇ ಕನ್ನಡ ಪ್ರೇಕ್ಷಕರನ್ನು. ಚಿತ್ರಮಂದಿರದವರು ನಂಬಿಕೊಂಡಿರುವುದು ಕೂಡ ಕನ್ನಡ ಸಿನಿಮಾಗಳನ್ನು. ಇದು ಒಂದು ರೀತಿಯ ಚೈನ್‌ ಲಿಂಕ್‌. ಹುಳವನ್ನು ಕಪ್ಪೆ ತಿನ್ನುತ್ತೆ, ಕಪ್ಪೆಯನ್ನು ಹಾವು ತಿನ್ನುತ್ತೆ, ಹಾವನ್ನು ಹದ್ದು ಹಿಡಿಯುತ್ತದೆ. ಹದ್ದು ಸತ್ತು ಕೆಳಗೆ ಬಿದ್ದಾಗ ಮತ್ತೆ ಹುಳವೇ ತಿನ್ನುತ್ತದೆ. ಹಾಗೆ ಚಿತ್ರರಂಗ ಕೂಡ ಚೈನ್‌ ಲಿಂಕ್‌. ಹಾಗಾಗಿ ಎಲ್ಲರೂ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ. ವಾಮನ ಸಿನಿಮಾಗೆ ಒಳ್ಳೆಯದಾಗಲಿ’ ಎಂದು ಮನವಿ ಮಾಡಿದ್ದಾರೆ.

ಈ ಹಿಂದೆ ದರ್ಶನ್ ಅಭಿನಯದ ಹೆಚ್ಚಿನ ಚಿತ್ರಗಳು ಬೇರೆ ಬಾಷೆಗಳಿಗೆ ಡಬ್ ಆಗಿದೆ ಹೊರತು ದರ್ಶನ್ ಬೇರೆ ಬಾಷೆಗಳಲ್ಲಿ ನಟಿಸಿಲ್ಲ ಮತ್ತು ಬೇರೆ ಬಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಿಲ್ಲ ಎನ್ನುವುದು ವಿಶೇಷ.

ಇದನ್ನೂ ಓದಿರಸ್ತೆಗಳಲ್ಲಿ ನಮಾಜ್ ಮಾಡಿದರೆ ಪಾಸ್ ​ಪೋರ್ಟ್​, ಚಾಲನಾ ಪರವಾನಗಿ ರದ್ದು..! ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್‌ ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ..!

ಶೌಚಾಲಯದ ನೀರಿನ ಮಾರಾಟದಿಂದ 300 ಕೋಟಿ ರೂ. ಸಂಪಾದನೆ..! ಶಾಕಿಂಗ್ ಮಾಹಿತಿ ನೀಡಿದ ಕೇಂದ್ರ ಸಚಿವ ಗಡ್ಕರಿ..!

ಪತ್ನಿಯನ್ನು ಕೊಂದು ಸೂಟ್‌ ಕೇಸ್‌ ನಲ್ಲಿ ತುಂಬಿದ್ದ ಪತಿ ಅರೆಸ್ಟ್..! ಬಾಡಿಗೆ ಮನೆಯಲ್ಲಿದ್ದವರ ಭೀಕರ ಕ್ರೈಂ ಕಹಾನಿ..!

  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget