ಇತರಜೀವನ ಶೈಲಿ/ಆರೋಗ್ಯಮಹಿಳೆ-ಆರೋಗ್ಯಸುಳ್ಯ

ನಾಳೆ ಕೆವಿಜಿ ಆಯುರ್ವೇದ ಕಾಲೇಜು-ಆಸ್ಪತ್ರೆಯಲ್ಲಿ “ಸ್ವರ್ಣ ಬಿಂದು ಪ್ರಾಶನ”, ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ಒಂದು ಹೆಜ್ಜೆ ಮುಂದಿಡಿ

156

ನ್ಯೂಸ್ ನಾಟೌಟ್: ನಿಮ್ಮ ಮಕ್ಕಳು ಪದೇ..ಪದೇ ಅನಾರೋಗ್ಯದಿಂದ ಬಳಲುತ್ತಿದ್ದಾರಾ..? ಆರೋಗ್ಯ ಸಮಸ್ಯೆಯಿಂದಾಗಿ ಶಾಲೆಗೆ ಗೈರು ಹಾಜರಾಗುವಂತಾಗಿದೆಯೇ..? ಹಾಗಿದ್ದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ಪೋಷಕರು ಸಂಕಲ್ಪ ಮಾಡಿ, ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಸ್ವರ್ಣ ಬಿಂದು ಪ್ರಾಶನವನ್ನು ನೀಡಿ ನಿಮ್ಮ ಮಕ್ಕಳನ್ನು ಭಾದಿಸುವ ಅನಾರೋಗ್ಯಗಳಿಂದ ದೂರವಿಡಿ.

ಈ ಹಿನ್ನೆಲೆಯಲ್ಲಿ ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏ.16 ರಂದು ಸ್ವರ್ಣ ಬಿಂದು ಪ್ರಾಶನವನ್ನು ಮಕ್ಕಳಿಗಾಗಿ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಕ್ಕಳ ಆರೋಗ್ಯಕ್ಕಾಗಿ ಆಯುರ್ವೇದ ಶಾಸ್ತ್ರದಲ್ಲಿ ಅನುಷ್ಠಾನದಲ್ಲಿರುವ ಸ್ವರ್ಣ ಬಿಂದು ಪ್ರಾಶನವು ಪುಷ್ಯ ನಕ್ಷತ್ರದ ಮಂಗಳಕರ ದಿನದಂದು ನೀಡಲಾಗುತ್ತದೆ. ಪುಷ್ಯ ನಕ್ಷತ್ರದ ದಿನವು ಪ್ರತಿ 27 ದಿನಗಳಿಗೊಮ್ಮೆ ಬರುತ್ತದೆ. ಸ್ವರ್ಣ ಬಿಂದು ಪ್ರಾಶನದಿಂದ ಮಕ್ಕಳಿಗೆ ಅನೇಕ ಉಪಯೋಗವಿದೆ.

ಇದು ಆಯುರ್ವೇದ ಶಾಸ್ತ್ರದಲ್ಲಿ ಅನುಷ್ಠಾನದಲ್ಲಿರುವ ಔಷಧ ಪದ್ಧತಿಯಾಗಿದ್ದು ಮಕ್ಕಳ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಏಕಾಗ್ರತೆ, ಗೃಹಣ ಶಕ್ತಿ ಮತ್ತು ಬುದ್ಧಿ ಶಕ್ತಿ ವೃದ್ಧಿಸುತ್ತದೆ. ಜೀರ್ಣಶಕ್ತಿ ವರ್ಧನೆ ಮತ್ತು ಮಕ್ಕಳ ಗ್ರಹ ಬಾಧೆಯನ್ನು ನಿವಾರಿಸುತ್ತದೆ. ಮಕ್ಕಳಲ್ಲಿ ದೀರ್ಘಾಯುಷ್ಯ ಮತ್ತು ಬಲವರ್ಧನೆಗೆ ಸಹಕಾರಿ ಹಾಗೂ ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ದೀರ್ಘಕಾಲ ರಕ್ಷಿಸುತ್ತದೆ. ಈ ಸ್ವರ್ಣ ಬಿಂದು ಪ್ರಾಶನವು ಸಂಸ್ಥೆಯ ಪ್ರಯೋಗಾಲಯದಲ್ಲಿ ಪ್ರತಿ ಬಾರಿಯೂ ಸುರಕ್ಷತಾ ಕ್ರಮದೊಂದಿಗೆ ಗುಣಮಟ್ಟವನ್ನು ಪರಿಶೀಲಿಸಿ ನೀಡಲಾಗುತ್ತದೆ. ಕೆ.ವಿ.ಜಿ. ಆಯುರ್ವೇದ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

See also  ಅರಂಬೂರು: ಪಾದಾಚಾರಿಗೆ ಗುದ್ದಿದ ದ್ವಿಚಕ್ರ ವಾಹನ, ಗಾಯಾಳು ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget   Ad Widget