ಚಿಕ್ಕಮಗಳೂರು

ಪತಿ-ಪತ್ನಿ ಜಗಳ, ತವರು ಮನೆ ಸೇರಿದ ಪತ್ನಿ;ಸಿಟ್ಟಿನಿಂದ ಅಳಿಯ ತವರು ಮನೆಗೆ ಮಾಡಿದ್ದೇನು ಗೊತ್ತಾ?

175

ನ್ಯೂಸ್ ನಾಟೌಟ್:ಪತಿ-ಪತ್ನಿ ಜಗಳವಾಡೋದು ಸಹಜ.ಕೆಲವೊಮ್ಮೆ ಇದು ತೀರಾ ವಿಪರೀತವಾದ್ರೆ ಹೆಂಡ್ತಿ ತವರು ಮನೆಗೆ ಹೋಗಿ ಬಿಡ್ತಾಳೆ.ಒಂದು ವಾರದ ಬಳಿಕ ಕೆಲವೊಂದು ಸಲ ಸಿಟ್ಟು ಸರಿಯಾಗುವುದಿದೆ.ಮತ್ತೆ ಪತ್ನಿ ಗಂಡನ ಮನೆ ಸೇರೋದಿದೆ.ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಪತಿಯೊಂದಿಗೆ ಜಗಳವಾಡಿಕೊಂಡು ಪತ್ನಿ ತವರು ಮನೆ ಸೇರಿದ್ದು, ಇದರಿಂದ ಸಿಟ್ಟು ಗೊಂಡ ಪತಿ ಪತ್ನಿಯ ತವರು ಮನೆಗೆ ಮಾಟ ಮಾಡಿಸಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಮತ್ತಿಕಟ್ಟೆ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.ಮೂಡಿಗೆರೆ ತಾಲೂಕಿನ ಮರಗಣಸೆ ಗ್ರಾಮದ ಗುರುಮೂರ್ತಿ ಕಳೆದ 12ವರ್ಷಗಳ ಹಿಂದೆ ಸುಮಿತ್ರ ಎಂಬುವರನ್ನು ಮದುವೆಯಾಗಿದ್ದರು.ಮದುವೆಯಾದ ದಿನದಿಂದ ಆಗಾಗ್ಗೆ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು.ಹೀಗೆ ಹಿರಿಯರು ಜತೆಗೂಡಿ ಅನೇಕ ಬಾರೀ ರಾಜೀ ಪಂಚಾಯಿತಿ ಮಾಡಿ ದಂಪತಿಯನ್ನು ಸರಿ ಮಾಡಿಸುತ್ತಿದ್ದರು.

ಆದರೆ ಅದೆನಾಯ್ತೋ ಏನೋ ಮತ್ತೆ ಅವರಿಬ್ಬರ ನಡುವೆ ಮತ್ತೆ ಜಗಳ ಶುರುವಾಗಿದೆ. ಕಳೆದ ಒಂದು ತಿಂಗಳ ಹಿಂದೆ ಗಂಡ ಹೆಂಡತಿ ನಡುವೆ ಶುರುವಾದ ಜಗಳ ನಿಲ್ಲಲೇ ಇಲ್ಲ. ಸುಮಿತ್ರ ಅಣ್ಣ ಸತೀಶನ ಮನೆಯಲ್ಲಿ ಉಳಿದುಕೊಂಡಿದ್ದಳು. ಇದರಿಂದ ಕೋಪಗೊಂಡ ಗುರುಮೂರ್ತಿ ಸುಮಿತ್ರ ಅಣ್ಣ ಸತೀಶ್ ಮನೆಗೆ ಬಂದು ಜಗಳವಾಡಿ ಆತನಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದಎನ್ನಲಾಗಿದೆ.

ಜೊತೆಗೆ ಚಾಕುವನ್ನು ತಂದಿದ್ದು ಅದನ್ನು ಅಲ್ಲಿಯೆ ಬಿಟ್ಟು ಹೋಗಿದ್ದಾನೆ. ನಂತರ ಯಾವುದೋ ಪ್ರಾಣಿಯನ್ನು ಬಲಿಕೊಟ್ಟು, ರಕ್ತವನ್ನು ಸುಮಿತ್ರ ಅಣ್ಣನ ಮನೆ ಬಾಗಿಲ ಮುಂದೆ ಹಾಕಿದ್ದಾನೆ ಅನ್ನುವ ಆರೋಪ ಕೇಳಿ ಬಂದಿದೆ. ವಾಮಾಚಾರ ಮಾಡಿಸಿದ್ದಾನೆಂದು ಸುಮಿತ್ರ ತವರು ಮನೆಯವರು ಗುರುಮೂರ್ತಿ ವಿರುದ್ಧ ಆರೋಪಿಸಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಗುರುಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ.

See also  ಇಂಧನ ಸಚಿವ ಕೆ.ಜೆ ಜಾರ್ಜ್ ಕಚೇರಿಯಲ್ಲಿ ಕಳ್ಳತನ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget