ಕರಾವಳಿಚಿಕ್ಕಮಗಳೂರು

ಆ ವ್ಯಕ್ತಿಯ ಜೀವ ಉಳಿಸಿತು ಬೈಕ್‌ ಇಂಡಿಕೇಟರ್‌..!,ಅಷ್ಟಕ್ಕೂ ಅಲ್ಲಿ ನಡೆದ ಘಟನೆಯೇನು?ಇಲ್ಲಿದೆ ಸಂಪೂರ್ಣ ಮಾಹಿತಿ..

184

ನ್ಯೂಸ್ ನಾಟೌಟ್ : ಕೆಲವೊಮ್ಮೆ ಅದೃಷ್ಟ ಕೈ ಕೊಟ್ರೆ ಯಾವ ಸಂದರ್ಭದಲ್ಲಿ ಏನೂ ಬೇಕಾದರೂ ಆಗಬಹುದು.ಅದೃಷ್ಟ ಅಂತ ನಮ್ಮ ಕೈ ಹಿಡಿದ್ರೆ ಯಾವುದೇ ಸಂದಿಗ್ಧ ಸಂದರ್ಭದಲ್ಲಿಯೂ ಕೂಡ ಭಗವಂತ ನಮ್ಮನ್ನು ಹೇಗಾದರೂ ಮಾಡಿ ಬಚಾವ್ ಮಾಡಬಲ್ಲ.ಹೌದು, ಇಲ್ಲೊಬ್ಬ ಸವಾರನಿಗೆ ಬೈಕ್‌ ಇಂಡಿಕೇಟರ್‌ ಆನ್‌ ಆಗಿದ್ದರಿಂದ (drunk and drive) ಅದೃಷ್ಟವಶಾತ್ ಆತನ ಜೀವ ಉಳಿದಿದೆ..!

ಭಾನುವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಈ ಘಟನೆ ವರದಿಯಾಗಿದೆ.ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದ ಕೆಲ ಸವಾರರಿಗೆ ಕೂಗಳತೆ ದೂರದಲ್ಲಿ ಇಂಡಿಕೇಟರ್‌ ಆನ್‌ ಆಗಿ ಕೆಳಗೆ ಬಿದ್ದಿದ್ದ ಬೈಕ್‌ವೊಂದು ಕಂಡಿತ್ತು.ಆಗ ಗಾಬರಿಯಾದ ಜನ ಬೈಕ್ ಸವಾರನ ಬಳಿ ಓಡಿಹೋಗಿದ್ದರು. ಹತ್ತಿರ ಹೋಗಿ ನೋಡಿದಾಗ ಬೈಕ್‌ವೊಂದು ರಸ್ತೆಬದಿ ಬಿದ್ದಿದ್ದು, ಸವಾರ ರಸ್ತೆ ಪಕ್ಕಕ್ಕೆ ಬಿದ್ದಿದ್ದ.ಇದೆಲ್ಲ ನೋಡಿದವರಿಗೆ ಬೈಕ್‌ ಅಪಘಾತವಾಗಿರಬೇಕು ಎಂದುಕೊಂಡಿದ್ದ ಜನ ಹತ್ತಿರ ಹೋಗಿ ನೋಡಿದಾಗ ಸವಾರ ಉಸಿರಾಡುತ್ತಿದ್ದ. ಕೂಡಲೇ ಅಲ್ಲಿದ್ದವರು ಅಪಘಾತವಾಗಿರಬಹುದೆಂದು ಅಂದಾಜಿಸಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು.

ಇತ್ತ ಆ್ಯಂಬುಲೆನ್ಸ್‌ ಬರುತ್ತಿದ್ದಂತೆ ಆತ ದಿಢೀರ್‌ ಎದ್ದು ಕುಳಿತಿದ್ದಾನೆ. ಸವಾರನನ್ನು ಕಂಡು ಅಲ್ಲಿದ್ದವರು ಶಾಕ್‌ ಗೆ ಒಳಗಾದರು.ಬಳಿಕ ಹತ್ತಿರ ಹೋಗಿ ವಿಚಾರಿಸಿ ಆತನನ್ನು ಮೇಲಕ್ಕೆ ಎತ್ತಿದಾಗಲೇ ಗೊತ್ತಾಗಿದ್ದು, ಕಂಠ ಪೂರ್ತಿ ಕುಡಿದು ಬೈಕ್‌ ಓಡಿಸಲು ಆಗದೆ ರಸ್ತೆಯಲ್ಲೇ ಮಲಗಿ ಬಿಟ್ಟಿದ್ದ ಎಂದು. ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಸವಾರ, ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲು ಮುಂದಾಗಿದ್ದಾನೆ. ಆದರೆ ಬೈಕ್‌ ಕಂಟ್ರೋಲ್‌ಗೆ ಸಿಗದೆ ಅತ್ತಿಂದಿತ್ತ ಓಡಿಸಿ ರಸ್ತೆ ಪಕ್ಕಕ್ಕೆ ಬಿದ್ದಿದೆ. ಬೈಕ್‌ ಪಕ್ಕದಲ್ಲೇ ಕುಡುಕ ಸವಾರ ಅಲ್ಲೇ ಹಾಯಾಗಿ ಮಲಗಿದ್ದ..!

ಪಕ್ಕದಲ್ಲಿದ್ದ ಬೈಕ್‌ ಇಂಡಿಕೇಟರ್‌ ಆನ್‌ ಆಗಿದ್ದರಿಂದ ಈತನ ಜೀವ ಉಳಿದಿದೆ. ಆ ಕತ್ತಲಿಲ್ಲ ಒಂದು ವೇಳೆ ಇಂಡಿಕೇಟರ್‌ ಆನ್‌ ಆಗಿರಲಿಲ್ಲ ಎಂದಿದ್ದರೆ, ಯಾವುದಾದರೂ ವಾಹನದಿಂದ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಆತನ ಅದೃಷ್ಟ ನೆಟ್ಟಗಿದ್ದರಿಂ ದ ಇಂಡಿಕೇಟರ್‌ನಿಂದ ಕುಡುಕನ ಜೀವ ಉಳಿದಿದೆ. ವಿಚಾರ ತಿಳಿಯುತ್ತಿದ್ದಂತೆ ಬಣಕಲ್ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಬೈಕ್ ಸವಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

See also  ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ದಿನಾಂಕ ವಿಸ್ತರಿಸಿದ್ದೇಕೆ ಸರ್ಕಾರ? ಯಾವತ್ತು ಕೊನೇಯ ದಿನಾಂಕ? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget