ಕ್ರೈಂವೈರಲ್ ನ್ಯೂಸ್

ಕೋಳಿ ಮಾಂಸ ತರುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ..! ಕುತ್ತಿಗೆಗೆ ಬಿಗಿದಿದ್ದ ಹಗ್ಗವನ್ನು ಅಡಗಿಸಿಟ್ಟಿದ್ದ ತಾಯಿ..!

149

ನ್ಯೂಸ್‌ ನಾಟೌಟ್‌: ಮನೆಗೆ ಕೋಳಿ ಮಾಂಸ ತರುವ ಕುರಿತು ಉಂಟಾದ ಜಗಳದಲ್ಲಿ, ಈ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಯುವಕರು ತಮ್ಮ ಸಹೋದರನನ್ನೇ ಉಸಿರುಗಟ್ಟಿಸಿ ಹತ್ಯೆಗೈದಿರುವ ಘಟನೆ ನವೆಂಬರ್ 9ರಂದು ಭೋಪಾಲ್ ನ ಬೈರಗಢ್ ನಲ್ಲಿ ನಡೆದಿದ್ದು, ಹತ್ಯೆಯ ಕಾರಣ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು 22 ವರ್ಷದ ಅನ್ಶುಲ್ ಯಾದವ್ ಎಂದು ಗುರುತಿಸಲಾಗಿದೆ.

ಪಾನಮತ್ತರಾಗಿದ್ದ ಮೂವರು ಸಹೋದರರ ಪೈಕಿ, ಓರ್ವ ಸಹೋದರ ಔತಣ ಕೂಟ ನಡೆಸಲು ಮನೆಗೆ ಕೋಳಿ ಮಾಂಸ ತರಬೇಕು ಎಂದು ಒತ್ತಾಯಿಸಿದ್ದಾನೆ. ಆದರೆ, ಮನೆಗೆ ಮಾಂಸಾಹಾರ ತರುವುದನ್ನು ವಿರೋಧಿಸಿರುವ ಆತನ ಹಿರಿಯ ಸಹೋದರರಿಬ್ಬರು ಆತನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ತಮ್ಮ ಸಹೋದರನ ಕುತ್ತಿಗೆಯನ್ನು ಹಗ್ಗವೊಂದರಿಂದ ಬಿಗಿದು ಉಳಿದಿಬ್ಬರು ಸಹೋದರರು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಕೃತ್ಯಕ್ಕೆ ಬಳಸಲಾಗಿದ್ದ ಹಗ್ಗವನ್ನು ಮೃತ ಯುವಕನ ತಾಯಿ ಬಚ್ಚಿಟ್ಟಿದ್ದ ಘಟನೆಯೂ ನಡೆದಿದೆ.
ಮೃತ ಯುವಕನ ಕುಟುಂಬವು ವಿದಿಶಾ ಜಿಲ್ಲೆಯ ಕೇರಿ ಗ್ರಾಮದವರಾಗಿದ್ದು, ಅಲ್ಲಿ ಅವರಿಗೆ ಕೃಷಿ ಭೂಮಿ ಇದೆ ಎನ್ನಲಾಗಿದೆ. ಮೃತ ಅನ್ಶುಲ್ ಯಾದವ್ ಹಾಗೂ ಆತನ ಸಹೋದರರು ಬೈರಗಢ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಸದಾ ಪಾನಮತ್ತರಾಗಿರುತ್ತಿದ್ದ ಸಹೋದರರು, ಮದ್ಯದ ಅಮಲಿನಲ್ಲಿ ಪದೇ ಪದೇ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಇಬ್ಬರು ಸಹೋದರರು ಹಾಗೂ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಅವರ ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Click

https://newsnotout.com/2024/11/sslc-man-issue-godess-statue-kananda-news-viral-news-f/
https://newsnotout.com/2024/11/isrel-pm-benjamin-netanyahu-kannada-news-viral-news-d/
See also  ಸುಳ್ಯ: ವಿದ್ಯಾರ್ಥಿಗಳಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಟೈರ್ ಹಠಾತ್ ಪಂಕ್ಚರ್..! ಬೈಕ್ ಪಲ್ಟಿಯಾಗಿ ಇಬ್ಬರಿಗೂ ಗಾಯ, ಆಸ್ಪತ್ರೆಗೆ ದಾಖಲು
  Ad Widget   Ad Widget     Ad Widget   Ad Widget   Ad Widget   Ad Widget