ಕ್ರೈಂವೈರಲ್ ನ್ಯೂಸ್

ಚಿರತೆ ಹಿಡಿಯಲು ಬೋನಿನೊಳಗೆ ಮೇಕೆ ಕಟ್ಟಿದ್ದ ಅರಣ್ಯ ಅಧಿಕಾರಿಗಳು! ಮೇಕೆಯನ್ನೇ ಕದ್ದೊಯ್ದ ಕಳ್ಳರು! ಅರಣ್ಯಾಧಿಕಾರಿ ಮಾಡಿದ್ದೇನು?

ನ್ಯೂಸ್ ನಾಟೌಟ್ : ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇಟ್ಟು ಅದರಲ್ಲಿ ಕಟ್ಟಿದ್ದ ಮೇಕೆಯನ್ನೇ ಕಳ್ಳರು ಹೊತ್ತೊಯ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯನಪುರ ಗ್ರಾಮದ ಬಳಿ ಬಾನುವಾರ ನಡೆದಿದೆ.
ಚನ್ನವಡೆಯನಪುರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಕರು, ಕುರಿಗಳನ್ನು ಸಾಯಿಸಿತ್ತು, ಇದನ್ನು ಹಿಡಿಯಲು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಮಾಹಿತಿಯ ಆಧಾರದಲ್ಲಿ ಚಿರತೆ ಸೆರಿ ಹಿಡಿಯಲು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಒತ್ತಾಯಕ್ಕಾಗಿ ಓಂಕಾರ ಅರಣ್ಯ ವಲಯದ ಅರಣ್ಯ ಅಧಿಕಾರಿ ಸತೀಶ್ ಕುಮಾರ್ ಚಿರತೆಗಾಗಿ ಬೋನ್ ಇರಿಸಿದ್ದರು.

ಚಿರತೆ ಆಹಾರಕ್ಕಾಗಿ ಬರಲು ಬೋನಿಗೆ ಮೇಕೆ ಕಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಹಿಂದಿರುಗಿದ್ದರು. ಮರುದಿನ ಬಂದು ನೋಡಿದಾಗ ಬೋನಿನಲ್ಲಿ ಮೇಕೆ ಕಾಣೆಯಾಗಿತ್ತು, ಬೋನಿಗೆ ಚಿರತೆ ಬಿದ್ದಿರಲಿಲ್ಲ.
ಚಿರತೆ ಏನಾದರೂ ಬಂದು ಮೇಕೆಯನ್ನು ಎಳೆದೊಯ್ದಿರಬಹುದೆಂದು ಅನುಮಾನ ಪಟ್ಟು ಚಿರತೆ ಬಂದು ಹೋಗಿರುವ ಕುರುಹುಗಳನ್ನು ಹುಡುಕಿದರಾದರೂ, ಚಿರತೆ ಬಂದು ಹೋಗಿರುವ ಯಾವುದೇ ಕುರುಹುಗಳು ಸಿಗದ ಕಾರಣ ಇದು ಕಳ್ಳರ ಕೈಚಳಕ, ಕಳ್ಳರೇ ಮೇಕೆಯನ್ನು ಹೊತ್ತೊಯ್ದಿದ್ದಾರೆ ಎಂದು ಅರಣ್ಯ ಅಧಿಕಾರಿ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅರಣ್ಯಾಧಿಕಾರಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related posts

ಮಾಲ್ಡೀವ್ಸ್ ಸೇನಾ ಪೈಲಟ್‌ ಗಳಿಗೆ ಭಾರತ ಕೊಟ್ಟ ವಿಮಾನಗಳನ್ನು ಹಾರಿಸಲು ಬರಲ್ಲ ಎಂದು ಒಪ್ಪಿಕೊಂಡ ರಕ್ಷಣಾ ಸಚಿವ..! ಭಾರತ ಕೊಟ್ಟ ಉಡುಗೊರೆ ದ್ವೀಪರಾಷ್ಟ್ರಕ್ಕೆ ಹೊರೆಯಾಯ್ತಾ..?

ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ..! ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಮುಂದಾದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್..!

ತಿರುಪತಿ ಪಾಸ್ ಕೊಡಿಸಲು ಕರ್ನಾಟಕ ಗೃಹ ಸಚಿವರ ಹೆಸರಲ್ಲಿ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳಿಗೆ ಬ್ಲ್ಯಾಕ್ ​ಮೇಲ್..! ವಿಷಯ ತಿಳಿದ ಗೃಹಸಚಿವರು ಮಾಡಿದ್ದೇನು..?