ಕರಾವಳಿಕ್ರೈಂವೈರಲ್ ನ್ಯೂಸ್

ಬೆಕ್ಕನ್ನು ರಕ್ಷಿಸಲೆಂದು ಬಾವಿಗಿಳಿದ ವ್ಯಕ್ತಿ ದುರಂತ ಅಂತ್ಯ! ಇಬ್ಬರು ಪುತ್ರಿಯರು ಅನಾಥ! ಇಲ್ಲಿದೆ ಮನಕಲಕುವ ಕಣ್ಣೀರ ಕಥೆ

194

ನ್ಯೂಸ್ ನಾಟೌಟ್ : ರೈಲು ನಿಲ್ದಾಣದ ಬಳಿ ತೆರೆದ ಬಾವಿಗೆ ಬಿದ್ದ ಬೆಕ್ಕುನ್ನು ರಕ್ಷಿಸುವ ವೇಳೆ ಓರ್ವ ವ್ಯಕ್ತಿ ಕೊನೆಯುಸಿರೆಳೆದ ಘಟನೆ ಬುಧವಾರ ಒರಿಸ್ಸಾದ ಭುವನೇಶ್ವರದಲ್ಲಿ ನಡೆದಿದೆ.

ಐಸ್ ಕ್ರೀಮ್ ಮಾರಾಟಗಾರ 50 ವರ್ಷದ ಸಿಬಾರಾಮ್ ಸಾಹೂ ಎಂಬವರು ಬಾವಿಗೆ ಬೆಕ್ಕು ಬಿದ್ದಿರುವುದನ್ನು ನೋಡಿ ರಕ್ಷಣೆಗೆಂದು ಬಾವಿಗೆ ಹಾರಿದ್ದಾರೆ ಎನ್ನಲಾಗಿದೆ.ಸಿಬರಾಂ ಸಾಹೂ ಹೊರಗೆ ಬಾರದೇ ಇದ್ದುದರಿಂದ ಮತ್ತಿಬ್ಬರು ಬಾವಿಗೆ ಇಳಿದಿದ್ದಾರೆ.

ಆದರೆ, ಬಾವಿಯೊಳಗೆ ಮತ್ತೆ ಇಳಿದ ಇಬ್ಬರೂ ಅಸ್ವಸ್ಥರಾಗಿದ್ದಾರೆ, ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಆದರೆ, ಬೆಕ್ಕಿನ ರಕ್ಷಣೆಗೆ ಇಳಿದಿದ್ದ ಸಿಬರಾಂ ಉಸಿರು ಚೆಲ್ಲಿದ್ದಾರೆ.ಇಬ್ಬರು ಪುತ್ರಿಯರನ್ನು ಅಗಲಿದ ಸಿಬರಾಂ ಸಾಹೂ ದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

See also  ರಾಷ್ಟ್ರಗೀತೆ ಹಾಡುವ ವೇಳೆ ಅಶಿಸ್ತಿನ ವರ್ತನೆ ತೋರಿದ ಬಿಹಾರ ಸಿಎಂ..! ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget