ಕರಾವಳಿಕ್ರೈಂ

ಸುಳ್ಯ: ಹೃದಯಾಘಾತದಿಂದ ಸಾವಿಗೀಡಾದ ವ್ಯಕ್ತಿಯ ಶವ ಕೊಂಡೊಯ್ಯಲು ಸಂಬಂಧಿಕರೇ ಬರಲಿಲ್ಲ..! ಕೊನೆಗೆ ಪೊಲೀಸರೇ ನಡೆಸಿದರು ಅಂತ್ಯಕ್ರಿಯೆ..!

162

ನ್ಯೂಸ್ ನಾಟೌಟ್ : ಸಾವು ಯಾವ ಕ್ಷಣದಲ್ಲೂ ಬೇಕಾದರೂ ಬರಬಹುದು. ಮಲಗಿರುವಾಗಲೂ ಉಸಿರು ನಿಲ್ಲಬಹುದು. ಹಾಗೆಯೇ ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಸಾವಿಗೀಡಾಗಿ ಹಲವು ದಿನವಾದರೂ ಆತನ ಶವವನ್ನು ಕೊಂಡೊಯ್ಯಲು ಮನೆಯವರೇ ಬರಲಿಲ್ಲ. ಕಾದು ಸುಸ್ತಾದ ಸುಳ್ಯ ಪೊಲೀಸರು ಕೊನೆಗೆ ಸಂಬಂಧಿಕರ ನೆಲೆಯಲ್ಲಿ ನಿಂತು ಶವದ ಅಂತಿಮ ಸಂಸ್ಕಾರ ಮಾಡಿದರು.

ಹೌದು, ಉತ್ತರ ಭಾರತದ ಮೂಲದ ವ್ಯಕ್ತಿಯೊಬ್ಬ ಸುಳ್ಯದ ರಥ ಬೀದಿಯಲ್ಲಿರುವ ಹೋಟೆಲ್ ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ. ಆತನ ಹೆಸರು ಶ್ರೀಲೂಲು ಎಂದಾಗಿತ್ತು. ಆತನಿಗೆ 48 ವರ್ಷವಾಗಿತ್ತು. ಈತ ಸೆ3ರಂದು ರಜೆ ಇದ್ದ ಕಾರಣಕ್ಕೆ ತನ್ನ ರೂಮಿನಲ್ಲಿ ಬಂದು ಮಲಗಿದ್ದ. ಈ ವೇಳೆ ಆತನ ಆರೋಗ್ಯದಲ್ಲಿ ತೀವ್ರ ಏರುಪೇರು ಸಂಭವಿಸಿದೆ. ಈ ಸಂದರ್ಭದಲ್ಲಿ ಆತನನ್ನು ತಕ್ಷಣ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ.

ಈತನ ಮನೆಯವರ ಬಗ್ಗೆ ಮಾಹಿತಿ ಸಿಗದ ಕಾರಣಕ್ಕೆ ಆಸ್ಪತ್ರೆಯವರು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಇದರಂತೆ ಪೊಲೀಸರು ಮನೆಯವರಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಶವವನ್ನು ಫ್ರೀಜರ್ ನಲ್ಲಿ ಇಡಲಾಗಿತ್ತು.ಹುಡುಕಾಟ ನಡೆಸಿದರೂ ಮನೆಯವರನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗದಿರುವುದರಿಂದ ಕೇರ್ಪಳ ರುದ್ರ ಭೂಮಿಯಲ್ಲಿ ಪೊಲೀಸರು ಸ್ಥಳೀಯರ ಸಹಕಾರ ಪಡೆದುಕೊಂಡು ಅಂತಿಮ ಸಂಸ್ಕಾರ ಕ್ರಿಯೆಯನ್ನು ನೆರವೇರಿಸಿದರು. ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಎಸ್‌ಐ ಸರಸ್ವತಿ ಉಪಸ್ಥಿತರಿದ್ದರು.

See also  ವ್ಯಕ್ತಿಗಳಿಂದ ಹಣ ಸ್ವೀಕರಿಸಿ ಪತ್ನಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಗಂಡನ ಒತ್ತಾಯದ ಆರೋಪ ,ಪಾಪಿ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget