ಕ್ರೈಂಸುಳ್ಯ

ಜಾಲ್ಸೂರು: ರಸ್ತೆ ನಿಲ್ಲಿಸಿದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ, ಜಖಂಗೊಂಡ ದ್ವಿಚಕ್ರ ವಾಹನ

ನ್ಯೂಸ್‌ ನಾಟೌಟ್‌: ಜಾಲ್ಸೂರಿನಲ್ಲಿ ಇಂದು ಬೆಳಗ್ಗೆ ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಘಟನೆ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಜಖಂಗೊಂಡಿದೆ. ದ್ವಿಚಕ್ರ ವಾಹನ ಯಶ್ವಿತ್ ಕಾಳಂಮನೆ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಅವರು ತಮ್ಮ‌ ಮನೆಯ ಎದುರಿನ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಈ ಸಂದರ್ಭ ಮುರೂರು‌ ಕಡೆಯಿಂದ ವೇಗವಾಗಿ ಬಂದ ಕಾರು ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ

ಬಳಿಕ ಕಾರು ಚಾಲಕ ಕಿಶೋರ್ ಕಾರಿನಿಂದ ಇಳಿದು ಸ್ಥಳೀಯರಲ್ಲಿ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ ರಸ್ತೆಯ ಬದಿಯ ಮನೆಯೊಂದಕ್ಕೆ ನುಗ್ಗಿ ಮಗುವಿಗೆ ಥಳಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಮಗು ಬೊಬ್ಬೆ ಇಟ್ಟಾಗ ಮನೆಯವರು, ಸ್ಥಳೀಯರು ಸೇರಿ ಕಾರು ಚಾಲಕನನ್ನು ಹಿಡಿದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ನಕಲಿ ಏಷಿಯನ್‌ ಪೇಂಟ್‌ ಫ್ಯಾಕ್ಟರಿ ಸ್ಥಾಪಿಸಿದ್ದ ಈತ ಪೊಲೀಸ್ ಬಲೆಗೆ ಬಿದ್ದದ್ದೇ ರೋಚಕ! 10ವರ್ಷಗಳಿಂದ ಕೋಟ್ಯಾಂತರ ರೂ. ವ್ಯಾಪಾರ!

ರೀಲ್ಸ್ ಮಾಡ್ತಿದ್ದ ಟೀಚರ್ ಶವ ಮಣ್ಣಿಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆ..! ಶಾಲೆಗೆ ಹೋಗಿ ಬರ್ತೇನೆ ಎಂದವಳು ಮತ್ತೆ ಬರಲೇ ಇಲ್ಲ

ಸಂಪಾಜೆಯಲ್ಲಿ ಭೀಕರ ಸ್ಕೂಟಿ ಅಪಘಾತ, ಓರ್ವನಿಗೆ ಗಂಭೀರ ಗಾಯ