ಕರಾವಳಿ

ಕಾಣಿಯೂರು: ಹೊಳೆಗೆ ಬಿದ್ದ ಜಾಗದಿಂದ 50 ಮೀ. ದೂರದಲ್ಲಿ ಕಾರು ಪತ್ತೆ

429

ನ್ಯೂಸ್ ನಾಟೌಟ್: ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಸೇತುವೆ ಮುರಿದುಕೊಂಡು ಉಕ್ಕಿ ಹರಿಯುತ್ತಿದ್ದ ಹೊಳೆಗೆ ಬಿದ್ದ ಕಾರು ನೀರಿನೊಳಗೆ ಇದ್ದು ಕಾರನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿದೆ, ಕಾರು ಬಿದ್ದ ಜಾಗದಿಂದ 50 ಮೀ. ದೂರಕ್ಕೆ ನೀರು ಎಳೆದೊಯ್ದಿದೆ. ಆದರೆ ಮಳೆ ಹಾಗೂ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ನ್ಯೂಸ್ ನಾಟೌಟ್ ಗೆ ಪ್ರತಿನಿಧಿ ತಿಳಿಸಿದ್ದಾರೆ.

ಮಂಜೇಶ್ವರ -ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರಿನಲ್ಲಿ ನಿನ್ನೆ ತಡರಾತ್ರಿ 12 ಗಂಟೆಗೆ ಕಾರು ಹೊಳೆಗೆ ಬೀಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ಕಾರಿನೊಳಗೆ ಎಷ್ಟು ಜನ ಇದ್ದರು ಎನ್ನುವ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಕೆಲವೇ ಹೊತ್ತಿನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವ ನಿರೀಕ್ಷೆ ಇದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

See also  Spandana Vijay Raghavendra:ಮರೆಯಾಯ್ತು ಚಿನ್ನಾರಿ ಮುತ್ತನ 'ಚಿನ್ನ', ಪಂಚಭೂತಗಳಲ್ಲಿ ಲೀನ ,ಸ್ಪಂದನಾ ವಿಧಿ ವಿಧಾನ ಪೂರೈಸಿದ ಪತಿ ವಿಜಯ್ ರಾಘವೇಂದ್ರ,ಮಗ ಶೌರ್ಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget