ಕರಾವಳಿಕ್ರೈಂ

ತರಕಾರಿ ಖರೀದಿಸುವ ಸೋಗಿನಲ್ಲಿ ಬಂದು ಸರ ಕಳ್ಳತನ,ಮೂರುವರೆ ಪವನ್ ಚಿನ್ನದ ಸರ ಎಗರಿಸಿ ಪರಾರಿ

238

ನ್ಯೂಸ್ ನಾಟೌಟ್ : ತರಕಾರಿ ಖರೀದಿಸುವ ಸೋಗಿನಲ್ಲಿ ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಬಂದ ಕಳ್ಳನೋರ್ವ ಅಂಗಡಿಯ ಮಾಲಕಿಯ ಕುತ್ತಿಗೆಯಲ್ಲಿದ್ದ ಮೂರೂವರೆ ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಕಾಸರಗೋಡಿನ ಪರವನಡ್ಕ ಕೊಟ್ಟಪುರದಲ್ಲಿ ನಡೆದಿದೆ.

ಕುಂಞಿಕೋರನ್‌ ಅವರ ಪತ್ನಿ ಲಕ್ಷ್ಮೀ (68) ಸರ ಕಳೆದುಕೊಂಡವರು. ಲಕ್ಷ್ಮೀ ಅವರ ಅಂಗಡಿಗೆ ಎ.26ರಂದು ಮಧ್ಯಾಹ್ನ 12 ಗಂಟೆಗೆ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಆಲೂಗಡ್ಡೆ ನೀಡುವಂತೆ ಕೇಳಿದ್ದ.ಆಲೂಗಡ್ಡೆ ತೆಗೆಯಲೆಂದು ಲಕ್ಷ್ಮೀ ಬಗ್ಗಿದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ ಎಂದು ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿದೆ.

See also  ಉರ್ಫಿ ಜಾವೇದ್ ಬಂಧನ..? ತುಂಡುಡುಗೆಯ ವಿಷಯಕ್ಕೆ ಬಂಧನವಾಯ್ತಾ..? ಏನಿದು ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget