ಕರಾವಳಿಸುಳ್ಯ

ಸುಳ್ಯ ದಸರಾ ಸಂಭ್ರಮಕ್ಕೆ ದಿನಗಣನೆ; ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡರಿಗೆ ಸುಳ್ಯ ದಸರಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ

154

ನ್ಯೂಸ್ ನಾಟೌಟ್ : ಸುಳ್ಯ ದಸರಾ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ.ಅ.20ರಿಂದ ಅ.28ರವರೆಗೆ ನಡೆಯಲಿರುವ ಅದ್ದೂರಿ ಕಾರ್ಯಕ್ರಮದ ವೈಭವಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಲಿದ್ದಾರೆ.

ಸುಳ್ಯ ದಸರಾ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಅ.27ರಂದು ನಡೆಯಲಿದ್ದು ಈ ಪ್ರಯಕ್ತ ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್ ಗೌಡರನ್ನು ಆಹ್ವಾನಿಸಲಾಯಿತು.

ಈ ವೇಳೆ ಸುಳ್ಯ ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್ ದಾಸ್, ಸಮಿತಿಯ ಪದಾಧಿಕಾರಿಗಳಾದ ತೀರ್ಥರಾಮ ಜಾಲ್ಸೂರು, ಎಂ.ಕೆ ಸತೀಶ್ ಆಮಂತ್ರಣ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಹೆಚ್.ಎಂ ನಂದಕುಮಾರ್ ಹಾಗೂ ಪ್ರಮುಖರಾದ ಭವಾನಿ ಶಂಕರ್ ಕಲ್ಮಡ್ಕ, ಕೆ ಟಿ ಭಾಗೀಶ್ ಉಪಸ್ಥಿತರಿದ್ದರು.

See also  10 ರೂ. ನಾಣ್ಯದಿಂದಲೇ 1 ಲಕ್ಷ ರೂ. ಸಂಗ್ರಹಿಸಿ ಸ್ಕೂಟಿ ಖರೀದಿಸಿದ ಮಹಿಳೆ..! ಚಿಲ್ಲರೆ ರಾಶಿಯನ್ನು ಕಂಡು ದಂಗಾದ ಶೋ ರೂಮ್ ಸಿಬ್ಬಂದಿ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget