ಕ್ರೈಂಬೆಂಗಳೂರುವೈರಲ್ ನ್ಯೂಸ್

ಕೆಫೆ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ವಿವಾದಾತ್ಮಕ ಹೇಳಿಕೆ..! ಪಾಕಿಸ್ತಾನದ ಭಯೋತ್ಪಾದಕರಲ್ಲ, ಇಲ್ಲೇ ಭಯೋತ್ಪಾದರನ್ನ ಸೃಷ್ಟಿಸಿದ್ದಾರೆ ಎಂದ ಸೂಲಿಬೆಲೆ

170

ನ್ಯೂಸ್ ನಾಟೌಟ್: ಪಾಕಿಸ್ತಾನದ ಭಯೋತ್ಪಾದಕರು ಇಲ್ಲಿ ಬಂದು ಮಾಡೋದು ಏನೂ ಇಲ್ಲ. ಇಲ್ಲೇ ಭಯೋತ್ಪಾದಕರನ್ನ ಸೃಷ್ಟಿ ಮಾಡಿದ್ದಾರೆ. ಅವರಿಗೆ ಸಪೋರ್ಟ್‌ ಮಾಡಲು ಕರ್ನಾಟಕ ಸರ್ಕಾರ ಇದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಬಹಳ ವರ್ಷಗಳ ನಂತರ ಬಾಂಬ್ ಬ್ಲಾಸ್ಟ್ ಆಗಿದ್ದನ್ನು ಕೇಳಿದ್ದೇವೆ. ಮೋದಿ ಪಿಎಂ ಆದ ನಂತರ ದೇಶದಲ್ಲಿ ಬಾಂಬ್ ಬ್ಲಾಸ್ಟ್ ಘಟನೆಗಳು ನಡೆದಿಲ್ಲ. ಬಹಳ ವರ್ಷಗಳ ನಂತರ ಈಗ ಬೆಂಗಳೂರಿನಲ್ಲಿ ನಡೆದಿದೆ. ಪಾಕಿಸ್ತಾನದ ಭಯೋತ್ಪಾದಕರು ಭಾರತಕ್ಕೆ ಬಂದು ಮಾಡೋದು ಏನೂ ಇಲ್ಲ.

ಇಲ್ಲಿಯೇ ಭಯೋತ್ಪಾದರನ್ನು ಸೃಷ್ಟಿ ಮಾಡಿಬಿಟ್ಟಿದ್ದಾರೆ. ಅವರಿಗೆ ಸಪೋರ್ಟ್‌ ಮಾಡಲು ಕರ್ನಾಟಕ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮೋದಿ ಪಾಕಿಸ್ತಾನದ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ಬಿಡ್ತಿಲ್ಲ. ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ಅಲ್ಲಿಯೇ ಮುಗಿಸಿ ಬಿಡ್ತಾರೆ. ಆದ್ರೆ ಈಗ ಪಾಕಿಸ್ತಾನದ ಭಯೋತ್ಪಾದಕರು ಭಾರತಕ್ಕೆ ಬಂದು ಮಾಡೋದಕ್ಕೆ ಏನೂ ಇಲ್ಲ.

ಅದಕ್ಕೆ ಇಲ್ಲಿಯೇ ಕೆಲವು ಭಯೋತ್ಪಾದರನ್ನು ಸೃಷ್ಟಿ ಮಾಡಿಬಿಟ್ಟಿದ್ದಾರೆ. ಅವರಿಗೆ ಸಪೋರ್ಟ್‌ ಮಾಡಲು ಕರ್ನಾಟಕ ಸರ್ಕಾರವಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ. ಸಂವಿಧಾನ ರಕ್ಷಣೆ ಮಾಡುವ ಕೇಂದ್ರದಲ್ಲಿ ಘೋಷಣೆ ಕೂಗಿದ್ದಾರೆ. ಬಿ.ಕೆ ಹರಿಪ್ರಸಾದ್ ಅವ್ರು ಪಾಕಿಸ್ತಾನ ಬಿಜೆಪಿಗೆ ಶತ್ರು ಇರಬಹುದು, ಕಾಂಗ್ರೆಸ್‌ಗೆ ಅಲ್ಲ ಅಂತ ಹೇಳಿದ್ದಾರೆ. ಅವರು ಅವರ ಲೇವಲ್ ಎಂತ ಎಂದು ತೋರಿಸಿಬಿಟ್ರು. ಕಾಂಗ್ರೆಸ್‌ ಏನು ಮಾಡಲು ಹೊರಟಿದೆ ಅಂತ ಇದರಿಂದಲೇ ಗೊತ್ತಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

See also  ಸುಳ್ಯ: ಪರಿವಾರಕಾನ ಬಳಿ ಮರ ಬಿದ್ದು ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget