ಕ್ರೈಂಬೆಂಗಳೂರುವೈರಲ್ ನ್ಯೂಸ್

ರವೆ ಇಡ್ಲಿ ತಿಂದು ಕೆಫೆಯೊಳಗೆ ಬಾಂಬ್ ಇಟ್ಟು ಹೋದವ ಯಾರು..? ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ

142

ನ್ಯೂಸ್ ನಾಟೌಟ್: ಬಾಂಬ್ ಇಟ್ಟಿದ್ದ ಶಂಕಿತ ಬಸ್​ನಲ್ಲಿ ಬಂದು, ರಾಮೇಶ್ವರಂ ಕೆಫೆಯಲ್ಲಿ ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋಗಿದ್ದಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದಾರೆ.

ಸ್ಫೋಟ ನಡೆದ ಸ್ಥಳಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮಾಧ್ಯಮಗಳ ಜೊತೆ ಮಾತನಾಡಿದ್ದು, ಬ್ಲಾಸ್ಟ್ ಆಗಿರೋದು ಬಾಂಬ್, ಆದರೆ ಕಡಿಮೆ ಅಪಾಯವುಳ್ಳ ಟೈಮರ್ ಬಾಂಬ್ ಇಟ್ಟು ಹೋಗಿದ್ದಾನೆ.

ಆದರೆ ಸ್ಫೋಟದ ಸೌಂಡ್ ಹೆಚ್ಚು ಬಂದಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬ್ಲಾಸ್ಟ್ ಆಗಿರೋ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಡಿಸಿಎಂ ಹೇಳಿದ್ದಾರೆ. ಎಫ್​ಎಸ್​ಎಲ್ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ.

ಸುಮಾರು 35 ವರ್ಷದ ಯುವಕನಿಂದ ಈ ಕೃತ್ಯ ನಡೆದಿದೆ. ಬ್ಯಾಗ್ ಇಟ್ಟ ಒಂದು ಗಂಟೆ ಬಳಿಕ ಸ್ಪೋಟವಾಗಿದೆ. ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಗಾಯಾಳುಗಳು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

See also  ಪುತ್ತೂರು: ಮತಾಂತರವಾಗಿ ಮುಸ್ಲಿಂ ಧರ್ಮಕ್ಕೆ ಬಂದರಷ್ಟೇ ಪ್ರೀತಿಸ್ತಾರಾ..? ಎಂದ ಮಾಳವಿಕಾ ಅವಿನಾಶ್, ಮಸೀದಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶವಿದೆಯಾ ಎಂದು ಕೇಳಿದ್ದೇಕೆ ನಟಿ?
  Ad Widget   Ad Widget     Ad Widget   Ad Widget   Ad Widget   Ad Widget