ಕ್ರೈಂವೈರಲ್ ನ್ಯೂಸ್

ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಬಸ್..! ಬಸ್ ನೊಳಗಿದ್ದ 30 ಪ್ರಯಾಣಿಕರಿಗೆ ಏನಾಯ್ತು?

187

ನ್ಯೂಸ್ ನಾಟೌಟ್: ಟೈರ್ ಬ್ಲಾಸ್ಟ್ ಆಗಿ ಖಾಸಗಿ ಬಸ್ ಹೊತ್ತಿ ಉರಿದ ಘಟನೆ ಸೋಮವಾರ ಬೆಳಗಿನ ಜಾವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪ ನಡೆದಿದೆ.

ಬೆಂಗಳೂರಿನಿಂದ ರಾಯಚೂರಿನ ಹಟ್ಟಿ ಚಿನ್ನದ ಗಣಿಯ ಕಡೆ ಹೊರಟಿದ್ದ ಖಾಸಗಿ ಬಸ್ಸೊಂದು ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಘಟನೆ ನಡೆದಿದ್ದು, ಈ ಖಾಸಗಿ ಬಸ್ಸಿನ ಹೆಸರು ನಾಗಶ್ರೀ ಎಂದು ವರದಿ ತಿಳಿಸಿದೆ.

ಈ ಬಸ್ ಬೆಂಗಳೂರಿನಿಂದ ಹೊರಟು, ಹೊಸಪೇಟೆ ಮಾರ್ಗವಾಗಿ ಹಟ್ಟಿಗೆ ತೆರಳುತ್ತಿತ್ತು. ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಗ್ರಾಮದ ಬಳಿಯಿಂದ ಸಾಗುತ್ತಿತ್ತು. ಆಗ, ಇದ್ದಕ್ಕಿದ್ದಂತೆ ಟೈರ್ ಸ್ಫೋಟಗೊಂಡಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟೈರ್ ಸ್ಫೋಟದಿಂದ ಚಕ್ರದ ರಿಮ್ ಗಳು ರಸ್ತೆ ಮೇಲೆ ಉಜ್ಜಿಕೊಂಡು ಹೋಗಿದ್ದರಿಂದಾಗಿ ಕಿಡಿಗಳು ಉಂಟಾಗಿ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕನ ಸಮಯಪ್ರಜ್ಞೆಯಿಂದ ಬಸ್ ನಲ್ಲಿ ಇದ್ದ ಮೂವತ್ತು ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಗಿದೆ.

ಹಾಗಾಗಿ, ಯಾವುದೇ ಜೀವಹಾನಿ ಸಂಭವಿಸಿಲ್ಲ.ಘಟನೆಯಲ್ಲಿ ಬಸ್ ಭಸ್ಮವಾಗಿತ್ತು, ಉಳಿದಂತೆ ಯಾವುದೇ ತೊಂದರೆಯಾಗಿಲ್ಲ, ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

See also  ಮಂಗಳೂರು: ಕಳವುಗೈದ ಬೈಕ್ ನಲ್ಲಿ ಜಾಲಿ ರೈಡ್! ಸಿಕ್ಕಿಬಿದ್ದ ಕಳ್ಳರು!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget