ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅಣ್ಣ ಸತ್ತನೆಂದು ಅತ್ತಿಗೆಯನ್ನು ವರಿಸಿದ ಸೋದರ..! ಆತನನ್ನು ಗುಂಡಿಕ್ಕಿ ಕೊಂದ ತಮ್ಮಂದಿರು..!

156

ನ್ಯೂಸ್ ನಾಟೌಟ್: ಅಣ್ಣನ ನಿಧನರಾದ ಬಳಿಕ ವಿಧವೆಯಾದ ಅತ್ತಿಗೆಯನ್ನು ವರಿಸಿದ ಮತ್ತೊಬ್ಬ ಸಹೋದರನನ್ನು ಇಬ್ಬರು ಕಿರಿಯ ಸೋದರರು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣ ಉತ್ತರ ಪ್ರದೇಶದ ಬಾಗಪತ್‌ ಗ್ರಾಮದಲ್ಲಿ ಶನಿವಾರ(ಜೂ.15) ನಡೆದಿದೆ.

ಮೃತರನ್ನು ಈಶ್ವರ್ ಎಂಬವರ ಪುತ್ರ ಯಶ್‌ವೀರ್ (32) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಯಶ್‌ವೀರ್ ನನ್ನು ಗುಂಡಿಕ್ಕಿ ಕೊಂದಿರುವ ಬಗ್ಗೆ ಪೊಲೀಸ್‌ ಠಾಣೆಗೆ ಕರೆ ಬಂದಿತ್ತು ಎನ್ನಲಾಗಿದೆ. ಕೂಡಲೇ ಘಟನಾಸ್ಥಳಕ್ಕೆ ಧಾವಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

‘ಈಶ್ವರ್‌ ಎಂಬವರಿಗೆ ಸುಖ್‌ವೀರ್‌, ಯಶ್‌ವೀರ್, ಓಂವೀರ್, ಉದಯವೀರ್ ಎಂಬ ನಾಲ್ವರು ಗಂಡು ಮಕ್ಕಳಿದ್ದರು. ಕಳೆದ ವರ್ಷ ಸುಖ್‌ವೀರ್‌ ನಿಧನರಾದ ನಂತರ ಅವರ ಪತ್ನಿ ರಿತು ಎಂಬಾಕೆಯನ್ನು ಕಿರಿಯ ಸಹೋದರ ಯಶ್‌ವೀರ್ ಮದುವೆಯಾಗಿದ್ದರು. ಆದರೆ, ಈ ಮದುವೆಗೆ ಸಹೋದರರಲ್ಲಿ ಒಮ್ಮತ ಇರಲಿಲ್ಲ. ಈ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಯಶ್‌ವೀರ್‌ ನನ್ನು ಈ ಇಬ್ಬರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Click 👇

https://newsnotout.com/2024/06/film-chember-issue-banning-darshan-and-visiting
https://newsnotout.com/2024/06/darshan-and-gang-issue-today-future-decisions-have-been-decided
https://newsnotout.com/2024/06/darshan-mb-patil-kannada-news-agriculture-department
See also  ಕಬಡ್ಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಓರ್ವ ಸಾವು..! ಹಲವರು ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget   Ad Widget