ಕರಾವಳಿಕ್ರೈಂ

ಬಾಲಕ ಹಠಾತ್ ನಾಪತ್ತೆ, ಬಾಲಕನಿಗಾಗಿ ಪೋಷಕರಿಂದ ತೀವ್ರ ಹುಡುಕಾಟ

ನ್ಯೂಸ್ ನಾಟೌಟ್: ಬಾಲಕನೋರ್ವ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಿಂದ ತಪ್ಪಿಸಿಕೊಂಡಿದ್ದಾನೆ.

ಉಸ್ಮಾನ್ ಅನ್ನುವವರ ಮಗ ಮಹಮ್ಮದ್ ಮೊಯಿನುದ್ದಿನ್ (14 ವರ್ಷ) ನಾಪತ್ತೆಯಾಗಿದ್ದಾನೆ. ಇದೀಗ ಪೋಷಕರು ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ ದ ವೇಳೆ 2.30 ರ ಸುಮಾರಿಗೆ ಈತ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಗುರುವಾಯುನ ಕೆರೆ ಬಳಿ ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಬಾಲಕ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಬದ್ಯಾರು ಸಮೀಪದಲ್ಲಿ ಹುಡುಕಾಟ ನಡೆಸಲಾಗುತ್ತಿದೆ ಎಂದು ನ್ಯೂಸ್ ನಾಟೌಟ್ ಗೆ ಬಾಲಕನ ತಂದೆ ಉಸ್ಮಾನ್ ತಿಳಿಸಿದ್ದಾರೆ. ಬಾಲಕನ ಬಗ್ಗೆ ಮಾಹಿತಿ ಸಿಕ್ಕಿದವರು ಬೆಳ್ತಂಗಡಿ ಠಾಣೆಗೆ ಅಥವಾ 8861335778 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದಾಗಿದೆ.

Related posts

ಮಂಗಳೂರು: ಚಿಕಿತ್ಸೆಗೆ ದಾಖಲಾಗಿದ್ದ ಮಹಿಳಾ ರೋಗಿ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ..! ಬಲವಂತವಾಗಿ ಮಹಿಳೆಯ ಬಟ್ಟೆಗಳನ್ನು ಬಿಚ್ಚಿ ಫೋಟೋ ಕ್ಲಿಕ್ಕಿಸಿದವ ಅರೆಸ್ಟ್

ಭಕ್ತರ ವೇಷದಲ್ಲಿ ಮಠಕ್ಕೆ ಬಂದು ಚಿನ್ನ, ಹಣ ದೋಚಿದ ಕಳ್ಳರು..! ಪಿಸ್ತೂಲ್‌ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದ ಸ್ವಾಮೀಜಿ..!

ಮನೆಯೊಳಗೆಯೇ ಮಗ ಸತ್ತರೂ ಅಂಧ ದಂಪತಿ ಊಟಕ್ಕಾಗಿ 4 ದಿನದಿಂದ ಕಾಯುತ್ತಿದ್ದರು..! ಇಲ್ಲಿದೆ ಮನಕಲಕುವ ಘಟನೆ..!