ಕ್ರೈಂ

ಬೈಕ್ ಕಂತು ಬಾಕಿ ಇಟ್ಟ, ಕೇಳಿದಕ್ಕೆ ಶೋರೋಂ ಮುಂದೆಯೇ ಬೈಕ್ ಗೆ ಬೆಂಕಿ ಇಟ್ಟ ಭೂಪ..!

ಫರಂಗಿಪೇಟೆ: ಇಲ್ಲಿನ ನಿವಾಸಿ ಮಹಮ್ಮದ್ ಹರ್ಷದ್ ಎಂಬಾತ ಬೈಕ್ ಕೊಳ್ಳಲು ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ ಸಾಲ ಪಡೆದಿದ್ದ ಮತ್ತು ಸಾಲದ ಕಂತನ್ನು ಕಟ್ಟದೆ ಹಾಗೆಯೇ ಬಾಕಿ ಉಳಿಸಿಕೊಂಡಿದ್ದ. ಫೈನಾನ್ಸ್ ಕಂಪನಿಯು ಮಾಲೀಕರ ಕೈಯಿಂದ ಬೈಕ್ ದಾಖಲೆಗಳನ್ನು ವಶಪಡಿಸಿಕೊಂಡಿತ್ತು ಹಾಗೂ ಸಾಲದ ಕಂತನ್ನು ಕಟ್ಟುವಂತೆ ತಾಕೀತು ಮಾಡಿತ್ತು. ಹರ್ಷದ್ ಈ ವಿಚಾರವಾಗಿ ಶೋರೂಂನಲ್ಲಿದ್ದ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ ಇದು ಸ್ವಲ್ಪ ಸಮಯದ ನಂತರ ಈ ವಿಚಾರ ವಾಗ್ವಾದಕ್ಕೆ ತಿರುಗಿತ್ತು. ರೊಚ್ಚಿಗೆದ್ದ ಹರ್ಷದ್ ಶೋರೂಮ್ ನಿಂದ ಹೊರನಡೆದು ತನ್ನ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

Related posts

ಚೀನಾದಲ್ಲಿ ಮತ್ತೆ ಉಲ್ಬಣಿಸಿತಾ ನಿಗೂಢ ನ್ಯುಮೋನಿಯಾ..? ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರ ನೀಡಿದ ಮಾರ್ಗಸೂಚಿಯಲ್ಲೇನಿದೆ?

‘ಅಗ್ನಿಸಾಕ್ಷಿ’ ಧಾರಾವಾಹಿ ನಟನಾಗಿದ್ದ ಸಂಪತ್ ಜಯರಾಮ್‌ ಆತ್ಮಹತ್ಯೆ!

ಅರಂಬೂರು: ಅಂಗಡಿಯೊಳಗೆ ನುಗ್ಗಿದ ಬೊಲೆರೊ ಜೀಪ್, ಚಾಲಕನ ನಿಯಂತ್ರಣ ತಪ್ಪಿ ಅವಘಡ