ವೈರಲ್ ನ್ಯೂಸ್

ಸಾವನ್ನೇ ಗೆದ್ದು ಬಂದ ಬೈಕ್ ಸವಾರ!

267

ನ್ಯೂಸ್ ನಾಟೌಟ್: ಜೀವನದಲ್ಲಿ ಹುಟ್ಟು ಮತ್ತು ಸಾವು ಇದ್ದೇ ಇರುತ್ತದೆ. ಹುಟ್ಟಿದ ವ್ಯಕ್ತಿ ಯಾವತ್ತಾದರೂ ತನ್ನ ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಅದು ಯಾವಾಗ, ಎಲ್ಲಿ ಎಂಬುವುದು ಯಾರಿಂದಲೂ ಊಹಿಸಲು ಅಸಾಧ್ಯ. ಆದರೆ ಹುಟ್ಟು ಸಾವಿನ ನಡುವೆ ನಡೆಯುವ ಕೆಲವೊಂದು ಸನ್ನಿವೇಶ ಮಾತ್ರ ಯಾವತ್ತೂ ಮರೆಯುದಕ್ಕೆ ಸಾಧ್ಯವಿಲ್ಲ. ಇಂಥದೊಂದು ಘಟನೆ ನಡೆದಿರುವುದು ತುಮಕೂರಿನ ಕುಣಿಗಲ್‌ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ.

ಇಲ್ಲೊಬ್ಬ ವ್ಯಕ್ತಿಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದ ಹೊಟೇಲ್‌ನ ಮುಂಭಾಗದಲ್ಲಿ ಬೈಕ್ ಮೇಲೆ ಕುಳಿತು ಪೋನ್‌ನಲ್ಲಿ ಮಾತನಾಡುತ್ತಿರುತ್ತಾನೆ. ಈ ವೇಳೆ ಹಾಸನದಿಂದ ಬೆಂಗಳೂರಿಗೆ ವೇಗವಾಗಿ ಸಂಚರಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಬೈಕ್ ಸವಾರನತ್ತ ಧಾವಿಸಿ ಬರುತ್ತದೆ. ಇದನ್ನು ಗಮನಿಸಿದ ಬೈಕ್‌ ಸವಾರ ತಕ್ಷಣ ಬೈಕನ್ನು ಬಿಟ್ಟು ಪಕ್ಕಕ್ಕೆ ಹಾರುತ್ತಾನೆ. ಕ್ಷಣ ಮಾತ್ರದಲ್ಲೇ ಲಾರಿ ಬೈಕ್‌ಗೆ ಡಿಕ್ಕಿಯಾಗಿ ಬೈಕ್‌ ನಜ್ಜುಗುಜ್ಜಾಗುತ್ತದೆ. ಕೂದಲೆಳೆಯ ಅಂತರದಲ್ಲಿ ಬೈಕ್‌ ಸವಾರ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಈ ವಿಡಿಯೋ ಮೈ ನಡುಗುವಂತೆ ಮಾಡಿದೆ. ಇದರಿಂದ ಗಮನಿಸಬೇಕು ಅದೃಷ್ಟವಿದ್ದರೆ ಎಷ್ಟು ದೊಡ್ಡ ಅನಾಹುತ ಸಂಭವಿಸಿದರೂ ಅಪಾಯದಿಂದ ಪಾರಾಗಬಹುದು. ಆದರೆ ಧೈರ್ಯದಿಂದ ಸವಾಲನ್ನುಎದುರಿಸುವ ಛಲ ನಮ್ಮಲ್ಲಿರಬೇಕು.

See also  ಮಂಗಳೂರು: ಊಟದ ವೇಳೆ 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ! ವಿದ್ಯಾರ್ಥಿಯೋರ್ವನ ಎದೆಗೆ ಮತ್ತೋರ್ವ ವಿದ್ಯಾರ್ಥಿ ಚಾಕು ಎಸೆದು ಕ್ರೌರ್ಯ! ಏನಿದು ಘಟನೆ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget