ವಿಡಿಯೋವೈರಲ್ ನ್ಯೂಸ್

ಸೇಫ್ ಆದರೂ ಬಿಗ್ ಬಾಸ್ ಮನೆಯಿಂದ ಹೊರನಡೆಯಲು ತೀರ್ಮಾನಿಸಿದ ವರ್ತೂರ್ ಸಂತೋಷ್..! ವರ್ತೂರ್ ತೀರ್ಮಾನಕ್ಕೆ ಕಿಚ್ಚ ಸುದೀಪ್ ಅಸಮಾಧಾನ

159

ನ್ಯೂಸ್ ನಾಟೌಟ್: ಕಲರ್ಸ್ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಹುಲಿ ಉಗುರು ವಿವಾದಕ್ಕೆ ಸಿಲುಕಿ ದೊಡ್ಮನೆಯಿಂದಲೇ ಅರಣ್ಯಾಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಆಗಿರುವ ವರ್ತೂರ್ ಸಂತೋಷ್ ಆ ಮನೆಯಿಂದಲೇ ಹೊರ ನಡೆಯಲು ತೀರ್ಮಾನಿಸಿದ್ದಾರೆ. ಸಹಜವಾಗಿಯೇ ಇದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ಹೌದು, ಕಿಚ್ಚನ ಪಂಚಾಯಿತಿ ಪ್ರತಿ ಭಾನುವಾರ ನಡೆಯುತ್ತದೆ. ವಾರದ ಕಿಚ್ಚನ ಕಥೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗುವುದು ವಾಡಿಕೆ. ಹೀಗೆ ಡೇಂಜರ್ ಝೋನ್ ನಲ್ಲಿದ್ದ ವರ್ತೂರ್ ಸಂತೋಷ್ ಸೇಫ್ ಆಗಿದ್ದಾರೆ.

ಆದರೆ ವರ್ತೂರ್ ಮಾತ್ರ ನನ್ನನ್ನು ಬಿಟ್ಟು ಬಿಡಿ, ನಾನು ಹೊರಗಡೆ ನಡೆದ ಕಹಿ ಘಟನೆಯಿಂದ ಹೊರ ಬಂದು ಇಲ್ಲಿ ಆಡಲಿಕ್ಕೆ ಪ್ರಯತ್ನಿಸುತ್ತಿದ್ದೇನೆ, ಆದರೆ ನನ್ನ ಕೈನಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದು ಮನೆಯಿಂದ ಹೊರಗೆ ನನ್ನನ್ನು ಬಿಟ್ಟು ಬಿಡಿ ಎಂದು ಕೈ ಮುಗಿದಿದ್ದಾರೆ.

ಈ ವೇಳೆ ಕಿಚ್ಚ ಸುದೀಪ್ ಗೂ ಈ ನಿರ್ಧಾರ ಅಚ್ಚರಿ ತಂದಿದೆ. ವರ್ತೂರ್ ನೀವು 34,15,472 ವೋಟ್ ಗಳನ್ನು ಪಡೆದುಕೊಂಡಿದ್ದೀರಿ. ಅಷ್ಟು ಜನರ ವಿರುದ್ಧವಾಗಿ ನಾನು ಹೋಗೋಕೆ ಆಗುವುದಿಲ್ಲ, ಹೋಗುವುದೂ ಇಲ್ಲ ಎಂದು ಸುದೀಪ್ ತಿಳಿಸಿದ್ದಾರೆ. ಹೀಗಾಗಿ ಭಾನುವಾರದ ಎಪಿಸೋಡ್ ಸಾಕಷ್ಟು ಕುತೂಹಲ ಕೆರಳಿಸಿದೆ.

See also  ಸಿಸಿ ಕ್ಯಾಮರಾಗೆ ಸ್ಪ್ರೇ ಮಾಡಿ ATMನಿಂದ 30 ಲಕ್ಷ ರೂ. ಹಣ ದೋಚಿದ ಕಳ್ಳರು..! ಗ್ಯಾಸ್ ಕಟರ್ ಮೂಲಕ ಎಟಿಎಂ ಮಷಿನ್ ತುಂಡರಿಸಿದ ಕದೀಮರು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget