ಸಿನಿಮಾಸುಳ್ಯ

ಸಂಪಾಜೆಯಲ್ಲಿ ಸಿಂಪಲ್ ಊಟ ಮಾಡಿದ ಖ್ಯಾತ ನಟಿ ಭಾರತೀ ವಿಷ್ಣುವರ್ಧನ್, ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೆಫೆಯಲ್ಲಿ1 ಗಂಟೆ ಕಾರು ನಿಲ್ಲಿಸಿದ ಬಂಗಾರ ಜಿಂಕೆ..!

ನ್ಯೂಸ್ ನಾಟೌಟ್: ಬಂಗಾರ ಜಿಂಕೆ ಖ್ಯಾತಿಯ ಹಿರಿಯ ಸಿನಿಮಾ ನಟಿ ಭಾರತೀ ವಿಷ್ಣು ವರ್ಧನ್ ಸಂಪಾಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಊಟ ಮಾಡಿದರು.

ಇತ್ತೀಚೆಗೆ ಅವರು ತಮ್ಮ ಕುಟುಂಬದೊಂದಿಗೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಸಂಪಾಜೆಯ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸಂಪಾಜೆ ಕೆಫೆಗೆ ಭೇಟಿ ನೀಡಿದರು. ಅಲ್ಲಿನ ಮಾಲೀಕರಾದ ಶಂಕರ್ ಪ್ರಸಾದ್ ರೈ ಹಾಗೂ ಅವರ ಕುಟುಂಬ ತಯಾರಿಸುವ ಊಟವನ್ನು ಸವಿದ ಅವರು ಸುಮಾರು 1 ಗಂಟೆ ಕುಟುಂಬದ ಜೊತೆಗೆ ಮಾತನಾಡಿದರು. ಅಲ್ಲಿನ ಆಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮೈಸೂರಿನತ್ತ ಪ್ರಯಾಣ ಬೆಳೆಸಿದರು.

ಕನ್ನಡದ ಹೆಸರಾಂತ ನಟ ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಧರ್ಮ ಪತ್ನಿ ಭಾರತೀ ವಿಷ್ಣುವರ್ಧನ್ ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ.

Related posts

ಹಿಂದಿ ಕಂಠಪಾಠದಲ್ಲಿ ಪ್ರಥಮ ಸ್ಥಾನದೊಂದಿಗೆ ಮಿಂಚಿದ ಬಿಂದುಶ್ರೀ, ನೆಟ್ಟಾರು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಜಿಲ್ಲಾಮಟ್ಟಕ್ಕೆ ಆಯ್ಕೆ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ನಾಗಕಟ್ಟೆಯಲ್ಲಿ ನಾಗರ ಪಂಚಮಿ ‌ ಆಚರಣೆ

ಸುಳ್ಯ: ಬಾಂಜಿಕೋಡಿಯಲ್ಲಿ ಕಾರು ಬೈಕ್‌ ನಡುವೆ ಅಪಘಾತ, ಬೈಕ್‌ನಲ್ಲಿದ್ದ ದಂಪತಿಗೆ ಗಾಯ