ಕರಾವಳಿಕ್ರೈಂಮಂಗಳೂರು

ಬಜರಂಗದಳದ ಸಂಯೋಜಕ ಅರೆಸ್ಟ್..! ಏನಿದು ಘಟನೆ..?

ನ್ಯೂಸ್ ನಾಟೌಟ್: ಬಜರಂಗದಳದ ಸಂಯೋಜಕ ಅರ್ಜುನ್ ಮಾಡೂರ ಎನ್ನುವವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣೆಯೊಳಗಡೆ ಅರ್ಜುನ್‌ ಮಾಡೂರು ಅವರಿಗೆ ಹಲ್ಲೆಗೈದಿದ್ದ ಆರೋಪಿ, ಕೇರಳದ ಹೊಸಂಗಡಿ ಕಡಂಬಾರು ನಿವಾಸಿ ಮಹಮ್ಮದ್‌ ಆಸಿಫ್ ಜಾಮೀನು ಪಡೆದು ಜೈಲಿನಿಂದ ಹೊರಬಂದ ಸಂದರ್ಭದಲ್ಲಿ ಆತನ ಮೇಲೆ ತಲವಾರು ದಾಳಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಮುಖಂಡ ಅರ್ಜುನ್‌ ಮಾಡೂರ ಅವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ತೊಕ್ಕೊಟ್ಟಿನ ಮೇಲ್ಸೇತುವೆಯಲ್ಲಿ ಸಂಭವಿಸಿದ್ದ ಕಾರುಗಳ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ನಡೆದ ಹೊಡೆದಾಟ ಉಳ್ಳಾಲ ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಈ ಸಂದರ್ಭ ಸ್ನೇಹಿತನ ಸಹಾಯಕ್ಕಾಗಿ ಠಾಣೆಗೆ ಆಗಮಿಸಿದ್ದ ಅರ್ಜುನ್‌ಗೆ ಇನ್ನೊಂದು ತಂಡದ ಮಹಮ್ನದ್ ಆಸೀಫ್ ಎಂಬಾತನು ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಅರ್ಜುನ್‌ ಮೇಲಿನ ಹಲ್ಲೆ ಖಂಡಿಸಿ ಮಧ್ಯರಾತ್ರಿಯೇ ಹಿಂದೂ ಸಂಘಟನೆ ಕಾರ್ಯಕರ್ತರು ಉಳ್ಳಾಲ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಬಳಿಕ ಪೊಲೀಸರು ಆಸಿಫ್ ನನ್ನು ಬಂಧಿಸಿದ್ದರು. ನ.8 ರಂದು ಆಸಿಫ್ ಜಾಮೀನಿನಲ್ಲಿ ಬಿಡುಗಡೆಯಾಗಿ ಹೊಸಂಗಡಿಗೆ ತೆರಳುತ್ತಿದ್ದಾಗ ತಲಪಾಡಿ ಬಳಿಯ ಕೆ.ಸಿ. ರೋಡ್‌ನಿಂದ ಮಾರಕಾಯುದ ಹೊಂದಿದ್ದ ಆಗಂತುಕರು ಬೆನ್ನಟ್ಟಿದ್ದರೆಂದು ಆರೋಪಿಸಿ ಆಸಿಫ್ ಉಳ್ಳಾಲ ಠಾಣೆಗೆ ದೂರು ನೀಡಿದ್ದ. ತನಿಖೆ ನಡೆಸಿದ್ದ ಪೊಲೀಸರು ಇಡ್ಯ ಈಶ್ವರ ನಗರದ ಅಣ್ಣಪ್ಪ ಸ್ವಾಮಿ ಯಾನೆ ಮನು (24), ಪಡೀಲ್ ನಾರ್ಲದ ಸಚಿನ್‌ (24), ಪಜೀರು ಪಾದಲ್ ಕೋಡಿಯ ಕುಶಿತ್ (18) ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ವಯಸ್ಕನನ್ನು ಬಂದಿಸಿದ್ದರು. ಈಗ ಅರ್ಜುನ್‌ನನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಕುಶಿತ್ ಎಂಬಾತ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾನೆ.

Related posts

ಇಂದು ಮಧ್ಯರಾತ್ರಿಯಿಂದ ಎರಡು ದಿನ ಮದ್ಯದಂಗಡಿ, ಬಾರ್‌ ಬಂದ್‌..!, ದ.ಕ . ಜಿಲ್ಲಾಧಿಕಾರಿ ಮುಲೈ ಮುಹಿಲನ್‌ ಮಹತ್ವದ ಆದೇಶ

ಸುಳ್ಯ:ಸ್ನೇಹ ಶಾಲೆಯಲ್ಲಿ ಯುವದಿನಾಚರಣೆ,ಪರಿಸರ ಸಂರಕ್ಷಣೆಯ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ, ಔಷಧಿ ತಯಾರಿಸಿದ ಕಂಪನಿ ವಿರುದ್ಧ ಕ್ರಮ ಎಂದ ಆರೋಗ್ಯ ಸಚಿವ