Latestಕರಾವಳಿಕೊಡಗುವೈರಲ್ ನ್ಯೂಸ್

ಭಾಗಮಂಡಲದ ಯುವಕರ ಛಲ ಬಿಡದ ಹೋರಾಟ, ಊರಿಗೊಂದು ಉಚಿತ ಆಂಬ್ಯುಲೆನ್ಸ್ ತಂದ ಅಂಜನಿಪುತ್ರ ಸೇವಾ ಬಳಗ

1.3k

ನ್ಯೂಸ್ ನಾಟೌಟ್: ಅಂಜನಿಪುತ್ರ ಸೇವಾ ಬಳಗ ಭಾಗಮಂಡಲ ವತಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆಗೆ ಭಾಗಮಂಡಲ ಮಾರ್ಕೆಟ್ ಬಳಿ ಸೋಮವಾರ ಜೂ.2ರಂದು ಚಾಲನೆ ನೀಡಲಾಯಿತು.

ಸಮಾನ ಮನಸ್ಕ ಸ್ಥಳೀಯ ಯುವಕರ ತಂಡವೊಂದು ಸೇರಿಕೊಂಡು ತಂಡವನ್ನು ರಚಿಸಿದರು. ಅಂಜನಿಪುತ್ರ ಸೇವಾ ಬಳಗ ಎಂದು ಹೆಸರನ್ನಿಟ್ಟು ಸಂಘಟನೆಯನ್ನು ಮಾಡಿದರು. ಊರಿನ ಹಲವಾರು ಮಂದಿ ಬಡವರಿಗೆ ಸಹಾಯವನ್ನು ಮಾಡಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯುವಕರ ತಂಡ ಕಾರ್ಯೋನ್ಮುಖವಾಗುತ್ತದೆ. ಇದೀಗ ಬಡ ಜನರಿಗೆ ಹೆಚ್ಚಿನ ಸೇವೆಯನ್ನು ನೀಡುವುದಕ್ಕಾಗಿ ಆಂಬ್ಯುಲೆನ್ಸ್ ತೆರೆಯಲಾಗಿದೆ. ಕಡು ಬಡವರಿಗೆ ಉಚಿತ ಹಾಗೂ ಇತರರಿಗೆ ಇಂಧನದ ಖರ್ಚಿನಲ್ಲಿ ದಿನದ 24 ಗಂಟೆಯೂ ಸೇವೆಗೆ ಈ ಆಂಬ್ಯುಲೆನ್ಸ್ ಲಭ್ಯವಿರಲಿದೆ.

ಭಾಗಮಂಡಲ ಗ್ರಾಮ ಪಂಚಾಯತ್ ಅಧ್ಯಕ್ಷ ಕಾಳನ ರವಿ, ಅಮೆ ಬಾಲಕೃಷ್ಣ, ನಂಜುಂಡಪ್ಪ, ದೇವಂಗೋಡಿ ಹರ್ಷ, ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಶೋಭಾ ಲಮಾಣಿ, ಹೊಸೂರು ಸತೀಶ್ ಕುಮಾರ್ ಜಾಯಪ್ಪ, ನರ್ಸ್ ತುಳಸಿ, ಅಂಜನಿಪುತ್ರ ಸೇವಾ ಬಳಗ ಭಾಗಮಂಡಲ ಅಧ್ಯಕ್ಷ ಚೇತನ್ ಕೂಡಕಂಡಿ, ಅಂಜನಿಪುತ್ರ ಸೇವಾ ಬಳಗ ಭಾಗಮಂಡಲ ಗೌರವಾಧ್ಯಕ್ಷ ಮನೋಹರ್ ಆಳ್ವ ಉಪಸ್ಥಿತರಿದ್ದರು.

See also  ಪುತ್ತೂರು: ರಿಕ್ಷಾ ಏರಿದ ಹುಡುಗಿ ಜೊತೆ ಅಸಭ್ಯ ವರ್ತನೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget