ನ್ಯೂಸ್ ನಾಟೌಟ್ : ಒಳ್ಳೆಯ ಸರಕಾರಿ ಕೆಲಸ, ಸಂಬಳ, ಕಾರು ಇದ್ದಾರೂ ಕೆಲವು ದುರಾಸೆಯ ಅಧಿಕಾರಿಗಳು ಲಂಚದ ವ್ಯಾಮೋಹಕ್ಕೆ ಬಿದ್ದು ಬಡವರ ಪ್ರಾಣ ಹಿಂಡುತ್ತಾರೆ. ಮನುಷ್ಯರಿಗೆ ಆಸೆ ಇದ್ದದ್ದೆ, ಆದರೆ ಅದು ದುರಾಸೆ ಆದರೆ ಹೀಗನೇ ಆಗುವುದು. ಎನ್ನುವುದಕ್ಕೆ ಇಲ್ಲೊಬ್ಬ ಮಹಿಳಾ ತಹಿಶೀಲ್ದಾರ್ ಪ್ರತ್ಯಕ್ಷ ಉದಾಹರಣೆ.
ಈಕೆಯ ಹೆಸರು ವರ್ಷಾ ಒಡೆಯರ್. ಬೆಂಗಳೂರು ಉತ್ತರ ತಾಲೂಕಿನ ತಹಶೀಲ್ದಾರ್. ಆಕೆ ಜಾಮೀನಿನ ಖಾತೆ ಬದಲಾವಣೆ ಮಾಡಲು ಕಾಂತರಾಜು ಎಂಬುವವರಿಂದ ಬ್ರೋಕರ್ ರಮೇಶ್ ಎಂಬುವವರ ಮೂಲಕ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಾಂತರಾಜು ಲೋಕಾಯುಕ್ತಕ್ಕೆ ದೂರು ನೀಡಿದ್ದಾರು. ನ.15 ರಂದು ವರ್ಷಾ ಅವರು 5 ಲಕ್ಷ ಲಂಚ ಸ್ವೀಕರಿಸುವ ವೇಳೆ ತಕ್ಷಣವೇ ಕಾರ್ಯಚರಣೆಯಲ್ಲಿದ್ದ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಮತ್ತು ಮಧ್ಯವರ್ತಿ ರಮೇಶ್ ಎಂಬವರನ್ನು ಬಂಧಿಸಿದ್ದಾರೆ.