Latest

ಬೆಂಗಳೂರು:ಕಟ್ಟಡ ಕಾರ್ಮಿಕರಿಗಾಗಿ ಸಿ.ಎಂ. ಸಿದ್ದರಾಮಯ್ಯರಿಂದ ಸಂಚಾರಿ ಆರೋಗ್ಯ ಘಟಕಗಳ ಉದ್ಘಾಟನೆ; ಮಂಡಳಿ ಸದಸ್ಯ ಕಲ್ಲುಗುಂಡಿಯ ಜಾನಿ ಕೆ.ಪಿ. ಭಾಗಿ

473

ನ್ಯೂಸ್‌ ನಾಟೌಟ್: ಕಟ್ಟಡ ಕಾರ್ಮಿಕರಿಗಾಗಿ ದೇಶದ ಮೊದಲ 100 ಸಂಚಾರಿ ಆರೋಗ್ಯ ಘಟಕಗಳ ಉದ್ಘಾಟನಾ ಕಾರ್ಯಕ್ರಮ ವಿದಾನಸೌಧದ ಆವರಣದಲ್ಲಿ ಮಾ.೧೧ರಂದು ನಡೆಯಿತು. ವಿಧಾನ ಸಭೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರ ಆರೋಗ್ಯ ಕಳಕಳಿ ಮುಂದಿಟ್ಟುಕೊಂಡು ನಡೆಸಲಾಯಿತು.ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಘನ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಿತು.

ಈ ವೇಳೆ ಶಿವಾಜಿನಗರ ಎಂ.ಎಲ್.ಎ ಆಗಿರುವ ಶ್ರೀ ರಿಝ್ವಾನ್ ಅರ್ಷಾದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಕಾರ್ಮಿಕ ಸಚಿವರು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ಸಂತೋಷ್ ಲಾಡ್ ಹಾಗೂ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಕಲ್ಲುಗುಂಡಿಯ K. P. ಜಾನಿ, ರಮೇಶ್ ಹೆಚ್, ಶ್ರೇಯಾಂಸ್ ಕುಮಾರ್ ಜೈನ್, ಬಸವರಾಜ್ ಕೊತ್ವಾಲ್ , ವಿಜಯಕುಮಾರ್ ಪಾಟೀಲ್ ಸೇರಿದಂತೆ ಮಂಡಳಿಯ ಮತ್ತು ಸರಕಾರದ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

See also  ಪಹಲ್ಗಾಮ್ ದಾಳಿ ಕುರಿತು ಟ್ವಿಟ್ಟರ್ ನಲ್ಲಿ ವಿವಾದಾತ್ಮಕ ಪೋಸ್ಟ್‌ !ಜಾನಪದ ಗಾಯಕಿ ವಿರುದ್ಧ ದೇಶದ್ರೋಹದ ಕೇಸ್ ದಾಖಲು!
  Ad Widget   Ad Widget   Ad Widget   Ad Widget   Ad Widget   Ad Widget   Ad Widget