ನ್ಯೂಸ್ ನಾಟೌಟ್: ಕಟ್ಟಡ ಕಾರ್ಮಿಕರಿಗಾಗಿ ದೇಶದ ಮೊದಲ 100 ಸಂಚಾರಿ ಆರೋಗ್ಯ ಘಟಕಗಳ ಉದ್ಘಾಟನಾ ಕಾರ್ಯಕ್ರಮ ವಿದಾನಸೌಧದ ಆವರಣದಲ್ಲಿ ಮಾ.೧೧ರಂದು ನಡೆಯಿತು. ವಿಧಾನ ಸಭೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರ ಆರೋಗ್ಯ ಕಳಕಳಿ ಮುಂದಿಟ್ಟುಕೊಂಡು ನಡೆಸಲಾಯಿತು.ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಘನ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಿತು.
ಈ ವೇಳೆ ಶಿವಾಜಿನಗರ ಎಂ.ಎಲ್.ಎ ಆಗಿರುವ ಶ್ರೀ ರಿಝ್ವಾನ್ ಅರ್ಷಾದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಕಾರ್ಮಿಕ ಸಚಿವರು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ಸಂತೋಷ್ ಲಾಡ್ ಹಾಗೂ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಕಲ್ಲುಗುಂಡಿಯ K. P. ಜಾನಿ, ರಮೇಶ್ ಹೆಚ್, ಶ್ರೇಯಾಂಸ್ ಕುಮಾರ್ ಜೈನ್, ಬಸವರಾಜ್ ಕೊತ್ವಾಲ್ , ವಿಜಯಕುಮಾರ್ ಪಾಟೀಲ್ ಸೇರಿದಂತೆ ಮಂಡಳಿಯ ಮತ್ತು ಸರಕಾರದ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.