ಕರಾವಳಿಕ್ರೈಂದಕ್ಷಿಣ ಕನ್ನಡವೈರಲ್ ನ್ಯೂಸ್

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಸರ್ಕಾರಿ ಬಸ್ ಢಿಕ್ಕಿ..! ಕೆ.ಎಸ್.ಆರ್.ಟಿ.ಸಿ ಚಾಲಕನ ವಿರುದ್ಧ ಪ್ರಯಾಣಿಕರ ಆಕ್ರೋಶ..!

172

ನ್ಯೂಸ್‌ ನಾಟೌಟ್‌: ಸೇತುವೆಯ ತಡೆಗೋಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಢಿಕ್ಕಿಯಾದ ಘಟನೆ ಬೆಳ್ತಂಗಡಿಯ ಕೊಯ್ಯರು ಸಮೀಪದ ಕಾಂತಾಜೆ ಎಂಬಲ್ಲಿ ಇಂದು(ಮೇ.26) ನಡೆದಿದೆ. ಸೇತುವೆಯ ತಡೆಗೋಡೆ ಮುರಿದರೂ ಬಸ್ ಅಲ್ಲಿಯೇ ನಿಂತಿದ್ದು, ಅಂದಾಜು 20 ಅಡಿ ಕೆಳಗೆ ಪ್ರಪಾತಕ್ಕೆ ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿತು.

ಇದರಿಂದಾಗಿ ದೊಡ್ಡ ಅಪಾಯ ತಪ್ಪಿದಂತಾಗಿದೆ. ಬಂದಾರಿನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವ ಸರ್ಕಾರಿ ಬಸ್ಸಿನಲ್ಲಿ ಸುಮಾರು 25 ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು ಎನ್ನಲಾಗಿದೆ. ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸಿದ ಕಾರಣ ನಿಯಂತ್ರಣ ತಪ್ಪಿ ಕೊಯ್ಯರು ಸಮೀಪದ ಕಾಂತಾಜೆಯ ಕಡಿದಾದ ತಿರುವಿನಲ್ಲಿ ಕಾಲುವೆಯ ಸೇತುವೆ ತಡೆಗೋಡೆಗೆ ಢಿಕ್ಕಿಯಾದೆ ಎಂದು ವರದಿ ತಿಳಿಸಿದೆ. ಪ್ರಯಾಣಿಕರು ಚಾಲಕನಿಗೆ ಬೈದಿದ್ದು, ಅತಿಯಾದ ವೇಗದಿಂದ ಹೀಗಾಗಿದೆ ಎಂದು ದೂರಲಾಗಿದೆ.

Click 👇

https://newsnotout.com/2024/05/neonotals-are-nomore-by-fire
https://newsnotout.com/2024/05/voice-modulation-app-and-kannada-news
https://newsnotout.com/2024/05/cinematic-theft-and-viral-video-issue
See also  ಕೋರ್ಟ್ ಹಾಲ್‌ ನಿಂದ ಹೊರ ಬಂದು ಆಟೋದಲ್ಲಿ ಕುಳಿತಿದ್ದ ಹಿರಿಯ ಜೀವಗಳಿಗೆ ತೀರ್ಪು ಕೊಟ್ಟ ಜಡ್ಜ್..! ಏನಿದು ಪ್ರಕರಣ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget