ಕರಾವಳಿ

ಬೆಳ್ತಂಗಡಿ: ಕಾಲೇಜು ಮುಗಿಸಿ ಈಜಲು ಹೋದ ವಿದ್ಯಾರ್ಥಿ ದಾರುಣ ಸಾವು

331

ನ್ಯೂಸ್ ನಾಟೌಟ್: ಕಾಲೇಜು ಮುಗಿಸಿ ನೀರಿನಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಸಾವಿಗೀಡಾದ ಘಟನೆ ಶನಿವಾರ ಬೆಳ್ತಂಗಡಿ ತಾಲೂಕಿನ ಏಳುವರೇಹಳ್ಳದ ಕಲ್ಲಂಡ ಬಳಿ ಸಂಜೆ ನಡೆದಿದೆ.

ಉಜಿರೆಯ ಖಾಸಗಿ ಕಾಲೇಜಿನ ಏಳು ಮಂದಿ ವಿದ್ಯಾರ್ಥಿಗಳ ತಂಡ ಶನಿವಾರ ಕಾಲೇಜು ಮುಗಿಸಿ ಮೂರು ಬೈಕ್‌ನಲ್ಲಿ ಕಲ್ಲಂಡ ಬಳಿಯ ತೋಟ್ಲಾಯಿಗುಂಡಿಗೆ ತೆರಳಿದ್ದಾರೆ. ಅಲ್ಲಿ ಈಜುವ ಸಂದರ್ಭದಲ್ಲಿ ವಿದ್ಯಾರ್ಥಿ ವಿವೇಕ್ ಭಂಡಾರಿ (೧೭ ವರ್ಷ) ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ತಕ್ಷಣ ಉಳಿದ ಸ್ನೇಹಿತರು ಕಿರುಚಿಕೊಂಡ ಸಂದರ್ಭದಲ್ಲಿ ಸ್ಥಳೀಯರೊಬ್ಬರು ನೀರಿಗೆ ದುಮುಕಿ ಆತನನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಕೊನೆಗೂ ಆತನನ್ನು ನೀರಿನಿಂದ ಮೇಲಕ್ಕೆ ಎಳೆದು ತಂದ ಅವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ. ವಿವೇಕ್ ಭಂಡಾರಿ ಧರ್ಮಸ್ಥಳ ಗ್ರಾಮದ ದೊಂಡೊಲೆಯವರು ಎಂದು ತಿಳಿದು ಬಂದಿದೆ.

See also  ಗಣೇಶ್‌ಪುರ-ಕೈಕಂಬದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ
  Ad Widget   Ad Widget   Ad Widget   Ad Widget   Ad Widget   Ad Widget   Ad Widget