ಕರಾವಳಿಕ್ರೈಂಮಂಗಳೂರುವೈರಲ್ ನ್ಯೂಸ್

ಬೆಳ್ತಂಗಡಿ: ಮಕ್ಕಳನ್ನು ಬೈಕ್ ನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ..! ಹೆದರಿ ಬೈಕ್ ಬಿಟ್ಟು ಓಡಿದ ತಂದೆ-ಮಕ್ಕಳು..!

ನ್ಯೂಸ್ ನಾಟೌಟ್: ಮಕ್ಕಳನ್ನು ಬೈಕ್ ನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಘಟನೆ ಬೆಳ್ತಂಗಡಿಯ ಶಿಶಿಲದಲ್ಲಿ ಇಂದು(ನ.21) ಬೆಳಗ್ಗೆ ನಡೆದಿದೆ.

ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ ಎಂಬವರು ಇಂದು ಬೆಳಗ್ಗೆ ತನ್ನ ಇಬ್ಬರು ಮಕ್ಕಳಾದ ಲಾವ್ಯಾ ಹಾಗೂ ಅದ್ವಿತ್ ರನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಇಂದು ಬೆಳಗ್ಗೆ 8:30ರ ಸುಮಾರಿಗೆ ವಸಂತ ಗೌಡ ಬೈಕಿನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ರಸ್ತೆಯ ತಿರುವಿನ ಮಧ್ಯೆ ಏಕಾಏಕಿ ಒಂಟಿ ಸಲಗ ಕಾಣಿಸಿಕೊಂಡಿದೆ ಎನ್ನಲಾಗಿದೆ. ಭಯದಿಂದ ತನ್ನ ಬೈಕನ್ನು ತಕ್ಷಣಕ್ಕೆ ನಿಲ್ಲಿಸಿದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಮಕ್ಕಳಿಬ್ಬರಿಬ್ಬರ ಕೈಕಾಲಿಗೆ ಗಾಯಗಳಾಗಿವೆ. ಕಾಡಾನೆ ಹತ್ತಿರ ಬರುತ್ತಿದ್ದಂತೆ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ.

ಓಡುತ್ತಿದ್ದಂತೆಯೇ ಬೈಕ್ ಕಡೆಗೆ ಆಗಮಿಸಿದ ಒಂಟಿ ಸಲಗ ಬೈಕನ್ನು ಸೊಂಡಿಲಿನಿಂದ ಕೆಡವಿ ಕಾಲಿನಿಂದ ತುಳಿದು ಸಂಪೂರ್ಣ ನಜ್ಜುಗುಜ್ಜುಗೊಳಿಸಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/11/devotee-theft-the-saibaba-statue-kannada-news-f-temple/
https://newsnotout.com/2024/11/mahindra-thar-kannada-news-video-viral-online-viral-dd/
https://newsnotout.com/2024/11/vitla-kannada-news-panjigadde-nomore-kannada-news-f/
https://newsnotout.com/2024/11/vikram-gowda-encounter-dgp-warning-udupi-kannada-news-viral-news-d/

Related posts

ಮಂಗಳೂರು:ರೈಲು ಅವಘಡ ತಪ್ಪಿಸಿದ 70 ವರ್ಷದ ಮಹಾತಾಯಿ,ಮಹಿಳೆಯನ್ನು ಶ್ಲಾಘಿಸಿದ ಸ್ಥಳೀಯರು

ಸುಳ್ಯ ಸೇರಿದಂತೆ ತಾಲೂಕಿನ ಮದ್ಯ ಪ್ರಿಯರ ಜೇಬಿಗೇ ಕತ್ತರಿ..! 1 ಕ್ವಾಟರ್ ಕೊಂಡ್ರೆ 30 ರಿಂದ 40 ರೂ.  ಹೆಚ್ಚುವರಿ ಪೀಕಿಸುವ ವೈನ್ ಶಾಪ್ ಗಳು..!

ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕೆಪ್ಪಟ್ರಾಯನ ಹಾವಳಿ..! ಮಕ್ಕಳನ್ನ ಅತಿಯಾಗಿ ಕಾಡುವ ಈ ಕಾಯಿಲೆಯನ್ನ ತಡೆ ಹಿಡಿಯೋಣ.. KVG ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರು ನೀಡಿದ ಸಲಹೆ ಸೂಚನೆಗಳೇನು..?