ಸುಳ್ಯ

ಬೆಳ್ಳಾರೆ : ಪೆರುವಾಜೆಯ ಶ್ರೀ ಜಲದುರ್ಗಾದೇವಿ ಬ್ರಹ್ಮರಥದ ಕೆತ್ತನೆಗೆ ಮರದ ಕೊರತೆ, ಭಕ್ತರು ಸಹಕರಿಸಲು ಕ್ಷೇತ್ರದ ಮನವಿ

177

ನ್ಯೂಸ್ ನಾಟೌಟ್: ದೇವಸ್ಥಾನದಲ್ಲಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಪೆರುವಾಜೆಯ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ನವೆಂಬರ್ ತಿಂಗಳಲ್ಲಿ ನೂತನ ರಥ ಸಮರ್ಪಣೆಯಾಗಲಿದ್ದು, ರಥದ ನಿರ್ಮಾಣಕ್ಕೆ ಸಾಗುವಾನಿ ಮರದ ಕೊರತೆಯಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.

ಬ್ರಹ್ಮರಥದ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಸುಮಾರು 1.10 ಕೋಟಿ ರೂ. ವೆಚ್ಚದಲ್ಲಿ ಕೆತ್ತನೆ ಹಾಗೂ ರಥ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಥ ನಿರ್ಮಾಣಕ್ಕೆ ಸಾಗುವಾನಿ ಮರದ ಅವಶ್ಯಕತೆಯಿದ್ದು, ಭಕ್ತರು ಮರ ಪೂರೈಸುವಂತೆ ದೇವಸ್ಥಾನದ ವತಿಯಿಂದ ವಿನಂತಿಸಲಾಗಿದೆ. ಕಾಷ್ಟ್ಯ ಶಿಲ್ಪಿಗಳಾದ ಹರೀಶ್ ಆಚಾರ್ಯ ಬೊಲಿಯಾರು ಅವರ ನೇತೃತ್ವದಲ್ಲಿ ಸಂತೋಷ್ ಆಚಾರ್ಯ, ಬಾಲಕೃಷ್ಣ ಆಚಾರ್ಯ ಮತ್ತಿತರರು ಮರದ ಕೆತ್ತನೆ ಕೆಲಸ ಮಾಡುತ್ತಿದ್ದಾರೆ. ಸಾಗುವಾನಿ ಹಾಗೂ ಕೀಲಾರ್ ಬೋಗಿ ಮರದಿಂದ ರಥ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೆತ್ತನೆ ಕೆಲಸಕ್ಕೆ ಸಾಗುವಾನಿ ಮರದ ಕೊರತೆಯಾಗಿದ್ದು, ಭಕ್ತರು ಸಾಗುವಾನಿ ಮರ ಹಾಗೂ ಧನ ಸಹಾಯ ನೀಡಿ ರಥ ನಿರ್ಮಾಣ ಕಾರ್ಯಕ್ಕೆ ಸಹಕರಿಸುವಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮನವಿ ಮಾಡಿದೆ.

See also  ಸುಳ್ಯ: ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ನಿಲ್ಲುವ ಜಾಗದಲ್ಲಿ ಖಾಸಗಿ ವಾಹನ ನಿಲ್ಲಿಸಿದ ಪ್ರಕರಣ, ರಕ್ಷಾ ಸಮಿತಿ ಮನವಿಗೆ ವೈದ್ಯಾಧಿಕಾರಿಗಳ ಸ್ಪಂದನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget