ಕರಾವಳಿಸುಳ್ಯ

ಬೆಳ್ಳಾರೆ:ಇಡ್ಯಾಡಿ ಎಂಬಲ್ಲಿ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಪ್ರಕರಣ, ವ್ಯಕ್ತಿಯ ಗುರುತು ಪತ್ತೆ..!

187

ನ್ಯೂಸ್‌ ನಾಟೌಟ್‌: ಸವಣೂರಿನ ಕುಮಾರಾಧಾರಾ ನದಿಯಲ್ಲಿ ಇಡ್ಯಾಡಿ ಎಂಬಲ್ಲಿ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.ಮೃತರನ್ನು ಪುತ್ತೂರು ತಾಲೂಕು ಕುಂಬ್ರ ಗ್ರಾಮದ ತಿಂಗಳಾಡಿಯ ಮಹಾಬಲ(71) ಎಂದು ಗುರುತಿಸಲಾಗಿದೆ.

ಮಹಾಬಲ ಅವರು ಕಳೆದ ಒಂದು ವಾರಗಳ ಹಿಂದೆ ನಾಪತ್ತೆಯಾಗಿದ್ದರೆಂದು ತಿಳಿದು ಬಂದಿದೆ.ಈ ಕುರಿತು ಮನೆಯವರು ತೀವ್ರ ಹುಡುಕಾಟ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ.ಇದೀಗ ಮಹಾಬಲ ಅವರ ಶವ ಸವಣೂರಿನ ಕುಮಾರಾಧಾರಾ ನದಿಯಲ್ಲಿ ಪತ್ತೆಯಾಗಿದ್ದು ,ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಸುಳ್ಯದ ಪ್ರಗತಿ ಆ್ಯಂಬುಲೆನ್ಸ್‌ನ ಮಾಲೀಕ ಅಚ್ಚು ಮತ್ತು ಲೈಫ್‌ಕೇರ್‌ ಆ್ಯಂಬುಲೆನ್ಸ್‌ನ ಚಾಲಕ ಶಮೀಮ್‌ ಸತತ ಎರಡು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತಿದ್ದರು.ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.ಇದೀಗ ಮೃತರ ಮನೆಗೆ ಮಾಹಿತಿ ಲಭ್ಯವಾಗಿದ್ದು,ಮನೆ ಸದಸ್ಯರು ಬೆಳ್ಳಾರೆ ಕಡೆ ತೆರಳಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

See also  ಗೂನಡ್ಕ ಬಳಿ ಅಂಗಡಿಗೆ ನುಗ್ಗಿದ ಕಾರು..!ಮಗು ಸಹಿತ ಹಲವರಿಗೆ ಗಾಯ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget