ಕ್ರೈಂ

ಬೆಳ್ಳಾರೆ: ಕಿಡ್ನಿಯಲ್ಲಿ ಗೆಡ್ಡೆ, ಮಗು ಸಾವು

ಬೆಳ್ಳಾರೆ: ಇಲ್ಲಿನ ಮೂರೂವರೆ ವರ್ಷದ ಗಂಡು ಮಗುವೊಂದು ಅನಾರೋಗ್ಯದಿಂದ ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿದೆ.

ಬೆಳ್ಳಾರೆಯ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಸಮೀಪದ ನಿವಾಸಿ ರಮೇಶ್ ಪೈ – ಸವಿತಾ ಪೈ ದಂಪತಿಯ ಮಗು ಹರ್ಷಿತ್ ಗೆ 6 ತಿಂಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಕಿಡ್ನಿಯಲ್ಲಿ ಗೆಡ್ಡೆ ಬೆಳೆದಿದೆ ಎಂದು ತಿಳಿಸಿದರು. ವೈದ್ಯರ ಸಲಹೆ ಮೇರೆಗೆ ಮಗುವನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ಕರೆದೊಯದು ಚಿಕಿತ್ಸೆ ಕೊಡಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಏಪ್ರಿಲ್ 13 ರಂದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮೃತ ಮಗು ಹರ್ಷಿತ್ ತಂದೆ-ತಾಯಿ, ಸಹೋದರಿ ರಶ್ಮಿ ಪೈಯನ್ನು ಅಗಲಿದ್ದಾರೆ.

Related posts

ಪಟ್ಟಣಗೆರೆ ಶೆಡ್​ ನಲ್ಲಿ ಕೊಲೆಗೂ ಮುನ್ನ ತೆಗೆದ ಫೋಟೋಗಳು ವೈರಲ್..! ಶೆಡ್ ​ನಲ್ಲಿ ಕೈ ಮುಗಿದು ಅಂಗಲಾಚುತ್ತಿರುವ ರೇಣುಕಾಸ್ವಾಮಿ..!

ಕುಕ್ಕೆ ಸುಬ್ರಹ್ಮಣ್ಯದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಒಳ ಉಡುಪಿನಲ್ಲಿ ಪತ್ತೆ..! ಗುತ್ತಿಗಾರಿನ ಅಮರ ಆಂಬುಲೆನ್ಸ್ ನ ಉಚಿತ ಸೇವೆಗೆ ಮತ್ತು ಹರಿಹರ ಸಂಗಮ ಕ್ಷೇತ್ರದ ಅಯ್ಯಪ್ಪ ಭಕ್ತರ ಸಹಕಾರಕ್ಕೆ ಭಾರೀ ಮೆಚ್ಚುಗೆ

ವಿವಾದಾತ್ಮಕ ಹೇಳಿಕೆ ನೀಡಿದ್ದ ಸ್ವಾಮೀಜಿಯಿಂದ ಪೊಲೀಸರಿಗೆ ಪತ್ರ, ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದದ್ದೇಕೆ ಸ್ವಾಮೀಜಿ..?